Advertisement

Ballari; ನೇಣಿಗೆ ಶರಣಾದ ಪೊಲೀಸ್ ಪೇದೆ

11:28 AM Oct 10, 2023 | Team Udayavani |

ಬಳ್ಳಾರಿ: ನಗರದ ಡಿಎಆರ್ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

Advertisement

ನೆರೆಯ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಆನೇಕಲ್ ತಾಂಡಾದ ಪ್ರಕಾಶ್ ನಾಯ್ಕ್ (25) ಮೃತ ದುರ್ದೈವಿ‌. 2021 ನೇ ಬ್ಯಾಂಚ್‍‌ನಲ್ಲಿ ಡಿಎಆರ್ ಪೊಲೀಸ್ ಆಗಿ ನೇಮಕವಾಗಿದ್ದ ಪ್ರಕಾಶ್ ನಾಯ್ಕ್ ನಗರದ ಡಿಎಆರ್ ಹೆಡ್ ಕ್ವಾಟ್ರಸ್ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಬೆಂಗಳೂರಿನಲ್ಲಿ ಎರಡು ತಿಂಗಳು ಕಾಲ ನಡೆಯುವ ಡಿ.ಶಾಟ್ ತರಬೇತಿಗೆ (ಭಯೋತ್ಪಾದಕ ನಿಗ್ರಹ ) ತೆರಳುವಂತೆ ಡಿಎಆರ್ ನ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಪ್ರಕಾಶ್ ನಾಯ್ಕ ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ರಾತ್ರಿ ಕ್ವಾಟ್ರಸ್ ರೂಮ್ ನಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2021ನೇ ಸಾಲಿನಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದನು. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next