Advertisement

21ರಿಂದ ಲಿಂ|ಪಟ್ಟದ್ದೇವರ ಸ್ಮರಣೋತ್ಸವ

03:48 PM Apr 11, 2019 | Naveen |

ಭಾಲ್ಕಿ: ಈ ಭಾಗದ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಲಿಂ| ಡಾ| ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದ್ದು, ಏ.21 ಮತ್ತು 22ರಂದು ನಡೆಯಲಿರುವ ಲಿಂ| ಡಾ| ಚನ್ನಬಸವ ಪಟ್ಟದ್ದೇವರ 20ನೇ ಸ್ಮರಣೋತ್ಸವ
ಹಾಗೂ ವಚನ ಜಾತ್ರೆ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಹಿರೇಮಠ ಸಂಸ್ಥಾನದಲ್ಲಿ ಲಿಂ| ಡಾ| ಚನ್ನಬಸವ ಪಟ್ಟದ್ದೇವರ 20ನೇ ಸ್ಮರಣೋತ್ಸವ ಹಾಗೂ ವಚನ ಜಾತ್ರೆ ನಿಮಿತ್ತ ಪ್ರಚಾರದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಭವ್ಯ ಪ್ರಮಾಣದಲ್ಲಿ ಸ್ಮರಣೋತ್ಸವ ಹಾಗೂ ವಚನ ಜಾತ್ರೆ ಹಮ್ಮಿಕೊಳ್ಳಲಾಗುತ್ತಿದೆ.
ಜೊತೆಗೆ ಅನ್ನ ದಾಸೋಹವೂ ನೆರವೇರಲಿದೆ. ಉತ್ತಮ ವಾಗ್ಮಿಗಳಿಂದ ಮಕ್ಕಳಿಗೆ ಶೈಕ್ಷಣಿಕ ಪ್ರಚೋದನಕಾರಿ ಸಭೆಗಳು ಜರುಗಲಿವೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ,
ಪ್ರಸಕ್ತ ಸಾಲಿನ ವಚನ ಜಾತ್ರೆ ಮತ್ತು ಲಿಂ| ಡಾ| ಚನ್ನಬಸವ ಪಟ್ಟದ್ದೇವರ 20ನೇ ಸ್ಮರಣೋತ್ಸವ ಸಂದರ್ಭದಲ್ಲಿ ಕೆಲವು ಮರಾಠಿ ಗ್ರಂಥಗಳು ಮತ್ತು ಸಿ.ಡಿ. ಲೋಕಾರ್ಪಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 140 ಗ್ರಂಥಗಳು ಪ್ರಕಟವಾಗಿರುವುದು ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ರೈತ
ಸಂಘದ ತಾಲೂಕು ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ರಾಜಪ್ಪ ಜಲ್ದೆ, ಸಂಜು ಕರಕಾಳೆ, ಸಂಗಮೇಶ ವಾಲೆ, ಕಪಲಾಪೂ ಗ್ರಾಮದ ಮಲಶೆಟ್ಟೆಪ್ಪ ಭಾಲ್ಕೆ, ಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next