Advertisement

ಖಾಂಡ್ಯದಲ್ಲಿ ಪದಗ್ರಹಣ ವೀಕ್ಷಣೆ

06:41 PM Jul 05, 2020 | Naveen |

ಬಾಳೆಹೊನ್ನೂರು: ಡಿ.ಕೆ.ಶಿವಕುಮಾರ್‌ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದ ವೀಡಿಯೋ ಕಾನ್ಫರೆನ್ಸ್‌ ನೇರ ಪ್ರಸಾರವನ್ನು ಸಮೀಪದ ಖಾಂಡ್ಯ ಹೋಬಳಿ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಾರ್ಕಂಡೇಶ್ವರ ಸಭಾ ಭವನದಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರದೊಂದಿಗೆ ವೀಕ್ಷಿಸಿದರು.

Advertisement

ನೇರ ಪ್ರಸಾರದ ಕಾರ್ಯಕ್ರಮವನ್ನು ಖಾಂಡ್ಯ ಹೋಬಳಿ ಅಧ್ಯಕ್ಷ ಬಿ.ಎನ್‌. ಸೋಮೇಶ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮದರ್‌ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್ಸ್, ಯೂತ್‌ ಕಾಂಗ್ರೆಸ್ಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ಸ್ ಮುಖಂಡರಾದ ಜಯಶೀಲ, ಗುರುಮೂರ್ತಿ, ನಾಗರಾಜ್‌, ಮಸಿಗದ್ದೆ ಸತೀಶ್‌, ರತನ್‌, ಮಂಜಪ್ಪಗೌಡ, ಎಸ್‌.ಪೇಟೆ ಸತೀಶ್‌, ಸುಚಿತ್ರ, ಆಶಾ, ಕೆ.ಎಲ್‌.ಮಂಜುನಾಥ್‌ಗೌಡ ಸೇರಿದಂತೆ ಖಾಂಡ್ಯ ಹೋಬಳಿ ಕಾಂಗ್ರೆಸ್ಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next