Advertisement

Gangs Of Godavari: ವೇದಿಕೆಯಲ್ಲಿ ನಟಿ ಜತೆಗಿನ ನಟ ಬಾಲಯ್ಯ ನಡವಳಿಕೆಗೆ ಆಕ್ರೋಶ…

01:05 PM May 30, 2024 | Team Udayavani |

ಹೈದರಾಬಾದ್:‌ ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾದ ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ತೆಲುಗು ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಅಲಿಯಾಸ್‌ ಬಾಲಯ್ಯ  ಅವರು ವೇದಿಕೆಯಲ್ಲಿ ನಟಿ ಅಂಜಲಿಯನ್ನು ಏಕಾಏಕಿ ದೂಡಿರುವ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಹಾವು… ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಗ್ಯಾಂಗ್ಸ್‌ ಆಫ್‌ ಗೋದಾವರಿ ಪ್ರಿ ರಿಲೀಸ್‌ ಕಾರ್ಯಕ್ರಮದ ವೈರಲ್‌ ವಿಡಿಯೋದಲ್ಲಿ, ಬಾಲಕೃಷ್ಣ ಅವರು ನಟಿ ಅಂಜಲಿಯನ್ನು ತಳ್ಳಿರುವ ಘಟನೆ ಸೆರೆಯಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ನಟ ವಿಶ್ವಕ್‌ ಸೇನ್‌ ಅವರ ಮುಂಬರುವ ಗ್ಯಾಂಗ್ಸ್‌ ಆಫ್‌ ಗೋದವಾರಿ ಸಿನಿಮಾದ ಪ್ರಮೋಶನ್‌ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರತಂಡದ ನಟ, ನಟಿಯರು ಗ್ರೂಪ್‌ ಫೋಟೊ ತೆಗೆಯಲು ಸಿದ್ಧತೆ ನಡೆಸುತ್ತಿದ್ದಾಗ, ಬಾಲಕೃಷ್ಣ ಅವರು ಅಂಜಲಿಗೆ ಪಕ್ಕಕ್ಕೆ ಸರಿಯುವಂತೆ ಹೇಳಿದ್ದರು. ಆದರೆ ನಟಿ ಅಂಜಲಿ ಅದಕ್ಕೆ ಸ್ಪಂದಿಸದೇ ಇದ್ದಾಗ, ಬಲವಂತವಾಗಿ ತಳ್ಳಿಬಿಟ್ಟಿದ್ದರು. ಆಗ  ಅಂಜಲಿ ನಕ್ಕು ಬದಿಗೆ ಸರಿದಿರುವುದು ವಿಡಿಯೋದಲ್ಲಿದೆ.


ಆದರೆ ಈ ವಿಡಿಯೋ ವೈರಲ್‌ ಆದ ನಂತರ ನೆಟ್ಟಿಗರು ಬಾಲಯ್ಯ ಅವರ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕೃಷ್ಣ ಅವರ ನಡವಳಿಕೆಗೆ ನಟಿ ನೇಹಾ ಶೆಟ್ಟಿ ಕೂಡಾ ಅಚ್ಚರಿ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next