Advertisement

ಬಾಲಾಕೋಟ್‌ ದಾಳಿಯಿಂದ ಮೋದಿ ಸರಕಾರ ಮರಳಿ ಅಧಿಕಾರಕ್ಕೆ: ಯೋಗಿ

10:27 AM Mar 12, 2019 | udayavani editorial |

ಲಕ್ನೋ : ಪಾಕಿಸ್ಥಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಕಳೆದ ಫೆ.26ರಂದು ಭಾರತೀಯ ವಾಯು ಪಡೆ ನಡೆಸಿದ ವಾಯು ದಾಳಿಯ ಟೀಕಾಕಾರಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, 2019ರ ಲೋಕಸಭಾ ಚುನಾವಣೆಗಳಲ್ಲಿ ಸುಲಭದಲ್ಲಿ  ಮರಳಿ ಅಧಿಕಾರಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ದಿಟ್ಟತನದ ದಾಳಿಯೇ ನೆರವಿಗೆ ಬರುವುದೆಂದು ಹೇಳಿದ್ದಾರೆ. 

Advertisement

ಸರಣಿ ಟ್ವೀಟ್‌ ಮೂಲಕ ಈ ವಿಶ್ವಾಸ ವ್ಯಕ್ತಪಡಿಸಿರುವ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದಲ್ಲಿನ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 74 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದೆಂದು ಹೇಳಿದರು. 

ಪಾಕ್‌ ಉಗ್ರರ ವಿರುದ್ದ ಮೋದಿ ಸರಕಾರ ಉರಿ ದಾಳಿಯ ಬಳಿಕ ಕೈಗೊಂಡಿದ್ದ ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಪುಲ್ವಾಮಾ ದಾಳಿಯ ಬಳಿಕ ಕೈಗೊಂಡ ಅತ್ಯಂತ ದಿಟ್ಟತನದ ಐಎಎಫ್ ವಾಯು ದಾಳಿಗಳು ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಲು ನೆರವಾಗುವುದು ನಿಶ್ಚಿತ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next