Advertisement

ಬಜೆ: ನಾಲ್ಕನೇ ದಿನವೂ ಮುಂದುವರಿದ ಶ್ರಮದಾನ

12:42 AM May 13, 2019 | sudhir |

ಉಡುಪಿ: ಬಜೆ ಡ್ಯಾಂಗೆ ನೀರು ಹರಿದು ಬರಲು ಸ್ವರ್ಣಾ ನದಿಯಲ್ಲಿ ತಡೆಯಾಗಿರುವ ಕಲ್ಲು, ಹೂಳನ್ನು ಶ್ರಮದಾನದ ಮೂಲಕ ತೆರವುಗೊಳಿಸುವ ಕಾರ್ಯ ರವಿವಾರ ಕೂಡ ಮುಂದುವರಿಯಿತು.

Advertisement

ಶ್ರಮದಾನ ನಾಲ್ಕು ದಿನಗಳನ್ನು ಪೂರೈಸಿತು. ರವಿವಾರ 50ಕ್ಕೂ ಅಧಿಕ ಮಂದಿ ಪಾಲ್ಗೊಂಡು ಹಾರೆ, ಪಿಕ್ಕಾಸುಗಳ ಮೂಲಕ ಹೂಳನ್ನು ತೆಗೆಯುವ ಕೆಲಸ ನಡೆಸಿದರು. ಹಿಟಾಚಿ ಯಂತ್ರದ ಮೂಲಕ ದೊಡ್ಡ ಬಂಡೆಗಳನ್ನು ಒಡೆದು ಪಕ್ಕಕ್ಕೆ ಸರಿಸಲಾಗುತ್ತಿದೆ.

ಶಾಸಕ ಕೆ. ರಘುಪತಿ ಭಟ್‌
ಅವರು ಕೂಡ ಬೆಳಗ್ಗಿನಿಂದ ರಾತ್ರಿವರೆಗೂ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಕಾರ್ಯಕರ್ತರು, ನಾಗರಿಕರ ಜತೆಗೆ ಸ್ಥಳದಲ್ಲಿಯೇ ಊಟ, ತಿಂಡಿ ಸೇವಿಸಿ ಶ್ರಮದಾನ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next