Advertisement

ತುಳುನಾಡ ತುಳುವೆರ್‌ ಕಲ್ಯಾಣ್‌ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ

04:46 PM Oct 22, 2019 | Suhan S |

ಮುಂಬಯಿ, ಅ. 21: ಪಾರನಾಕಾ ವಸಾಯಿಗಾಂವ್‌ ಶ್ರೀ ಸುಕೃತೀಂದ್ರ ಕಲಾ ಮಂದಿರ ಜಿಎಸ್‌ಬಿ ಸಮಾಜ ಸೇವಾ ಸಂಘ ಆಯೋಜಿಸಿದ ನಲ್ವತ್ತನೇ ವಾರ್ಷಿಕ ಶಾರದೋತ್ಸವದ ಸಂದರ್ಭದಲ್ಲಿ ಅ. 4ರಂದು ಸಂಜೆ ವಸಾಯಿರೋಡ್‌ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

Advertisement

ಅಮೇಯ್‌ ಗಣೇಶ್‌ ಪೈ ಇವರಿಂದ ಭಕ್ತಿ ಸುಧಾ ಕಾರ್ಯಕ್ರಮವು ಭಕ್ತಾದಿಗಳನ್ನು ರಂಜಿಸಿತು. ಅವರು ಮರಾಠಿ, ಕನ್ನಡ, ಕೊಂಕಣಿ ಮತ್ತು ಹಿಂದಿ ಭಜನೆಗಳನ್ನು ಹಾಡಿದರು. ಹಾರ್ಮೋನಿಯಂನಲ್ಲಿ ನಿಡ್ಡೋಡಿ ಗುರುಪ್ರಸಾದ್‌ ಪ್ರಭು, ತಬಲಾದಲ್ಲಿ ಅಕ್ಷಯ್‌ ಅನಿಲ್‌ ಪೈ, ಪಖ್ವಾಜ್‌ನಲ್ಲಿ ಗಣೇಶ್‌ ಪೈ, ತಾಳದಲ್ಲಿ ಅಶೋಕ್‌ ಶಿಂಧೆ ಸಹಕರಿಸಿದರು. ಸ್ಮಿತಾ ಗಣೇಶ್‌ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಕಲಾವಿದರನ್ನು ಜಿಎಸ್‌ಬಿ ಸಮಾಜ ಪಾರನಾಕಾ ವಸಾಯಿಗಾಂವ್‌ ಸಮಿತಿಯವರು ಸಮ್ಮಾನಿಸಿ ಗೌರವಿಸಿದರು. ಪಾರನಾಕಾ ಜಿಎಸ್‌ಬಿ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಸಾಯಿರೋಡ್‌ ಜಿಎಸ್‌ಬಿ ಸಮಾಜ ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next