Advertisement

ಸಿಕ್ಖ್ ಸಮುದಾಯದಿಂದ ಬೈಸಾಖೀ ಆಚರಣೆ

10:11 AM Apr 15, 2018 | |

ಕೂಳೂರು : ಸಿಕ್ಖ್ ಸಮುದಾಯವು ಕೂಳೂರಿನಲ್ಲಿರುವ ಗುರುದ್ವಾರದಲ್ಲಿ ಶನಿವಾರ ಬೈಸಾಖೀ (ಯುಗಾದಿ) ಹಬ್ಬ ಆಚರಿಸಿತು.

Advertisement

ಸಿಕ್ಖ್ ರೈತರು ಹೊಸ ವರ್ಷವನ್ನು ಗೋಧಿ ಬೆಳೆಯ ಕಟಾವು ಮಾಡುವ ಸಂದರ್ಭ ಸಂತಸದಿಂದ ಆಚರಿಸದರೆ, ಇನ್ನೊಂದೆಡೆ ಸಿಕ್ಖ್ ರ 10ನೇ ಗುರು ಗುರು ಗೋವಿಂದ್‌ ಸಿಂಗ್‌ ಎ. 13, 1699ರಂದು ಖಾಲ್ಸಾ ಪಂಥ ಸ್ಥಾಪಿಸಿದ ನೆನಪಾಗಿ ಆಚರಿಸುತ್ತಾರೆ. ಮಂಗಳೂರು, ಸುರತ್ಕಲ್‌ ಸಹಿತ ಉದ್ಯೋಗ ನಿಮಿತ್ತ ನೆಲೆಸಿರುವ ನೂರಾರು ಸಿಕ್ಖ್ರು ಗುರುದ್ವಾರಕ್ಕೆ ಆಗಮಿಸಿ ಗುರು ಗೋವಿಂದರ ಗ್ರಂಥಕ್ಕೆ ನಮಸ್ಕರಿಸಿ, ವಿಶೇಷ ಪ್ರವಚನದಲ್ಲಿ ಭಾಗವಹಿಸಿದರು. ಬಳಿಕ ಕರ್ನಾಟಕದ ನೆರೆ ಹೊರೆಯ ಮಂದಿಗೆ ಹೊಸ ವರ್ಷದ ಅನ್ನದಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next