Advertisement

ಬೇಲ್‌ ಗಾಡಿ ಕಾಂಗ್ರೆಸ್‌ ನಾಯಕರು ಬೇಲ್‌ನಲ್ಲಿ: ಜೈಪುರದಲ್ಲಿ ಮೋದಿ

04:29 PM Jul 07, 2018 | Team Udayavani |

ಜೈಪುರ : ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷವನ್ನು ‘ಬೇಲ್‌ ಗಾಡಿ’ ಎಂದು ಕರೆದಿದ್ದಾರೆ; ಪಕ್ಷದ ಹೆಚ್ಚಿನ ಸದಸ್ಯರೆಲ್ಲ ‘ಬೇಲ್‌’ನಲ್ಲಿ ಹೊರಗಿದ್ದಾರೆ ಎಂದು ಹೇಳಿದ್ದಾರೆ.

Advertisement

“ಕಾಂಗ್ರೆಸ್‌ ಪಕ್ಷವನ್ನು ಈಚಿನ ದಿನಗಳಲ್ಲಿ ಅನೇಕರು ಬೇಲ್‌ ಗಾಡಿ ಎಂದು ಕರೆಯುತ್ತಿದ್ದಾರೆ; ಕಾಂಗ್ರೆಸ್‌ನ ದಿಗ್ಗಜ ನೇತಾಗಳು ಮತ್ತು ಮಾಜಿ ಸಚಿವರು ಈ ದಿನಗಳಲ್ಲಿ ಬೇಲ್‌ ನಲ್ಲಿ ಇದ್ದಾರೆ’ ಎಂದು ಪ್ರಧಾನಿ ಮೋದಿ ಅವರು ಜೈಪುರದಲ್ಲಿ ಹೇಳಿದರು. 

ರಾಜ್ಯದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಾಡಿರುವ ಕೆಲಸಗಳನ್ನು ಪ್ರಶಂಸಿಸಿದ ಮೋದಿ, “ಕೆಲವರು ಇದ್ದಾರೆ, ಅವರು ಯಾವುದೇ ಒಳ್ಳೆಯ ಕೆಲಸಗಳನ್ನು ಮೆಚ್ಚುವುದಿಲ್ಲ; ಅದು ಕೇಂದ್ರದ್ದೇ ಇರಲಿ ಅಥವಾ ವಸುಂಧರಾ ರಾಜೆ ಸರಕಾರದ್ದೇ ಇರಲಿ. ಆದರೆ ರಾಜೇ ಸರಕಾರದ ಒಳ್ಳೆಯ ಕೆಲಸಗಳ ಫ‌ಲಾನಭವಿಗಳ ಮುಖದಲ್ಲಿ ಕಂಡುಬರುತ್ತಿರುವ ಸಂತಸವನ್ನು ನಾವಿಲ್ಲಿ ಕಾಣಬಹುದಾಗಿದೆ’ ಎಂದು ಹೇಳಿದರು. 

2016ರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗಿದ್ದ ಸರ್ಜಿಕಲ್‌ ಸ್ಟ್ರೈಕ್‌ ಉಲ್ಲೇಖೀಸಿ ಮಾತನಾಡಿದ ಪ್ರಧಾನಿ ಮೋದಿ, “ರಾಜಕೀಯ ವಿರೋಧಿಗಳು ದೇಶದ ಸೇನೆಯ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಪಾಪ ಎಸಗಿದ್ದಾರೆ; ಹಿಂದೆ ಈ ರೀತಿಯದ್ದು ನಡೆದದ್ದೇ ಇಲ್ಲ; ರಾಜಕೀಯ ಉದ್ದೇಶಕ್ಕಾಗಿ ಸೇನೆಯ ಶಕ್ತಿಯನ್ನು ಕಡೆಗಣಿಸಿ ಮಾತನಾಡುವವರನ್ನು ದೇಶದ ಜನರು ಕ್ಷಮಿಸುವುದಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದರು. 

ಕೇಂದ್ರ ಸರಕಾರ ಮತ್ತು ರಾಜಸ್ಥಾನದಲ್ಲಿನ ಆಳುವ ಬಿಜೆಪಿ ಸರಕಾರದ ಜನ ಕಲ್ಯಾಣ ಕಾರ್ಯಕ್ರಮಗಳ ಫ‌ಲಾನುಭವಿಗಳ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಈ ವರ್ಷಾಂತ್ಯ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next