Advertisement

ಬೈಕಂಪಾಡಿ: ಕಾರ್ಖಾನೆಯಲ್ಲಿ ಅಗ್ನಿ ದುರಂತ

01:18 AM Apr 17, 2023 | Team Udayavani |

ಬೈಕಂಪಾಡಿ: ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ವಿದ್ಯುತ್‌ ಪ್ರವಹಿಸುವಲ್ಲಿ ಏರು ಪೇರಾಗಿ ಅಗ್ನಿ ಅನಾಹುತ ಸಂಭವಿಸಿ ಸುಮಾರು 10 ಲಕ್ಷ ರೂ. ಮೌಲ್ಯದ ಸೊತ್ತು ಹಾನಿಯಾಗಿದೆ.

Advertisement

ಮಧುಬನ್‌ ಗ್ರಾಫಿಕ್ಸ್‌ನಲ್ಲಿ ರವಿವಾರ ರಾತ್ರಿ 8ರ ಸುಮಾರಿಗೆ ವಿದ್ಯುತ್‌ ಮೀಟರ್‌ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡು ವಿದ್ಯುತ್‌ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ
ಕೂಡಲೇ ಮೆಸ್ಕಾಂನವರು ಪರಿಸರದ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಿದರು. ಪರಿಸರದಲ್ಲಿದ್ದ ಇತರ ಕೈಗಾರಿಕೆಗಳ ಕಾರ್ಮಿಕರು ಧಾವಿಸಿ ಬಂದು ರಸ್ತೆ ಬದಿಯಲ್ಲಿದ್ದ ಮರಳನ್ನು ಬೆಂಕಿಗೆ ಎರಚುವ ಮೂಲಕ ಬೆಂಕಿಯನ್ನು ನಿಯಂತ್ರಿಸಿದರು ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next