Advertisement

ಬಾಹುಬಲಿ ಕಾಫಿ ಟೇಬಲ್‌ ಬುಕ್‌ ಬಿಡುಗಡೆ

06:00 AM Feb 23, 2018 | Team Udayavani |

ಬೆಂಗಳೂರು: ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ “ಉದಯವಾಣಿ’ ಹೊರತಂದಿರುವ ಬಾಹುಬಲಿ ಕುರಿತ ಅತ್ಯಾಕರ್ಷಕ  ಕೃತಿಯನ್ನು (ಕಾಫಿ ಟೇಬಲ್‌ ಬುಕ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಿಡುಗಡೆಗೊಳಿಸಿದರು.


ಅಧಿಕೃತ ನಿವಾಸ ಕಾವೇರಿಯಲ್ಲಿ ಕೃತಿ ಬಿಡುಗಡೆಗೊಳಿಸಿ ವಿಶ್ವದ ಗಮನ ಸೆಳೆದಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ “ಉದಯವಾಣಿ’ ಪತ್ರಿಕೆಯು ವಿಶೇಷ ಕೃತಿ ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದರು.


ಶ್ರವಣಬೆಳಗೊಳ ಹಾಗೂ ಬಾಹುಬಲಿ ಇತಿಹಾಸದ ಸಮಗ್ರ ಚಿತ್ರಣ ನೀಡುವುದರ ಜತೆಗೆ ಬಾಹುಬಲಿ ಮೂರ್ತಿ, ಮಹಾಮಸ್ತಕಾಭಿಷೇಕ, ಆ ಪರಿಸರದ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳ ಅಂದವಾದ ಚಿತ್ರ ಒಳಗೊಂಡಿರುವುದು ಕೃತಿಯ ಮೆರುಗು ಹೆಚ್ಚಿಸಿದೆ ಎಂದು ತಿಳಿಸಿದರು.

Advertisement

ಶ್ಲಾಘನೆ
ಇದೇ ಸಂದರ್ಭದಲ್ಲಿ  ಶ್ರವಣಬೆಳಗೊಳದಲ್ಲಿ ಕೃತಿ ಬಿಡುಗಡೆಗೊಳಿಸಿದ  ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಇದೊಂದು ಕಲಾತ್ಮಕ ಕೃತಿ ಎಂದು ಬಣ್ಣಿಸಿದರು.


ಉದಯವಾಣಿಯ  ಈ ಪ್ರಯತ್ನ ಶ್ರೀ ಕ್ಷೇತ್ರದ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಅಸಂಖ್ಯಾತ ಭಕ್ತ ಸಮೂಹಕ್ಕೆ ಇದು ಮೆಚ್ಚುಗೆಯಾಗಲಿದೆ ಎಂದು  ಇದೇ ಸಂದರ್ಭದಲ್ಲಿ ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಪೈ ಅವರಿಗೆ ಸಂದೇಶ ರವಾನಿಸಿದರು.

ಮಣಿಪಾಲ್‌ ಮೀಡಿಯಾ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ಕುಮಾರ್‌,  ಉದಯವಾಣಿ ಬೆಂಗಳೂರು ಆವೃತ್ತಿ ಸಂಪಾದಕ ಶಿವಸುಬ್ರಹ್ಮಣ್ಯ ಕೆ. ಉಪಸ್ಥಿತರಿದ್ದರು. “ಬಾಹುಬಲಿ’ ಕಾಫಿ ಟೇಬಲ್‌ ಬುಕ್‌ 152 ಪುಟಗಳನ್ನು  ಒಳಗೊಂಡಿದೆ.

Video:FAKKRUDHIN H

Advertisement

Udayavani is now on Telegram. Click here to join our channel and stay updated with the latest news.

Next