Advertisement

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

03:51 PM Sep 23, 2023 | Team Udayavani |

ಬಹ್ರೈನ್‌; ದ್ವೀಪ ದೇಶವಾದ ಬಹ್ರೈನ್‌ಗೆ ಆಗಮಿಸಿ ಅಧಿಕಾರ ವಹಿಸಿಕೊಂಡ ಭಾರತದ ನೂತನ ನಿಯೋಜಿತ ರಾಯಭಾರಿ ವಿನೋದ್‌ ಕೆ. ಜಾಕೋಬ್‌ ಅವರನ್ನು ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ ರೈ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಗೌರವಿಸಿ, ಅಭಿನಂದಿಸಿದರು.

Advertisement

ಈ ವೇಳೆ ಬಹ್ರೈನ್‌ನ ಕನ್ನಡ ಸಂಘದ ಇತಿಹಾಸ ಹಾಗೂ ಕನ್ನಡ ಭವನ ನಿರ್ಮಾಣದ ಕುರಿತು ವಿಸ್ತೃತವಾಗಿ ಅವರಿಗೆ ತಿಳಿಸಲಾಯಿತು. ಸೆಪ್ಟಂಬರ್‌ನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಅದರ ಮುಖ್ಯ ಅತಿಥಿಗಳಾಗಿ ಬರುವಂತೆ ಆಹ್ವಾನಿಸಲಾಯಿತು.

ಕನ್ನಡ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾ ಸಿ, ಅಭಿನಂದಿಸಿದ ವಿನೋದ್‌ ಕೆ. ಜಾಕೋಬ್‌ ಸಂಘಕ್ಕೆ ಶುಭಹಾರೈಸಿದರು. ಈ ವೇಳೆ ಭಾರತೀಯ ದೂತವಾಸದ ಇಜೈಸ್‌ ಅಸ್ಲಂ, ದ್ವಿತೀಯ ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

 ವರದಿ – ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next