Advertisement

Bagalkote; ಮೌಲಾನಾ ಮೇಲೆ ಹಲ್ಲೆ: ಬಿಗುವಿನ ವಾತಾವರಣ,ಇಬ್ಬರ ಬಂಧನ

11:30 PM Aug 18, 2024 | Team Udayavani |

ಬಾಗಲಕೋಟೆ : ನವನಗರದ ಸೆಕ್ಟರ್ ನಂ.4ರ‌‌ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಹಚ್ಚುವ ವಿಷಯಕ್ಕೆ ನಡೆದ ಸಣ್ಣ‌ ಜಗಳ, ವಿಕೋಪಕ್ಕೆ ಇರುಗಿದ್ದು, ಮೌಲಾನಾ ಮೇಲೆ‌ ಹಲ್ಲೆ ನಡೆಸಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

Advertisement

ಬೆಳಗ್ಗೆ ನಡೆದ ಜಗಳದ‌ ಹಿನ್ನೆಲೆ‌ ಸಂಜೆ, ಮೌಲಾನಾ ಮೇಲೆ‌ ಕಾರ್ತಿಕ‌ ಮತ್ತು ಪ್ರೀತಮ್, ನಾಗರಾಜ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ,‌ ಮುಸ್ಲಿಂ ಸಮುದಾಯದ ಪ್ರಮುಖರು, ರಾತ್ರಿ ನವನಗರ‌ ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಮುಸ್ಲಿಂ‌ ಮುಖಂಡರನ್ನು ಪೊಲೀಸರು ಸಮಾಧಾನಪಡಿಸಿದ್ದು, ಆರೋಪಿಗಳಾದ ಕಾರ್ತಿಕ‌ ಮತ್ತು ಪ್ರೀತಮ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ ಎಂಬಾತ ಓಡಿ ಹೋಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯಿಂದ‌ ನವನಗರ‌ ಪೊಲೀಸ್ ಠಾಣೆ ಎದುರು‌ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next