Advertisement

ಬದಿಯಡ್ಕ ಮಂಡಲ ಕಾಂಗ್ರೆಸ್‌: ಅಂಚೆ ಕಚೇರಿ ಮುಂಭಾಗ ಧರಣಿ

10:22 PM Sep 26, 2020 | sudhir |

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್‌ ನೇತೃತ್ವದಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಬದಿಯಡ್ಕ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.

Advertisement

ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ನೀಲಕಂಠನ್‌ ಕೇಂದ್ರ ಸರಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾ ಕಾರ್ಪೋರೇಟ್‌ಗಳ ಪರವಾದ ಆಡಳಿತವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

ಬದಿಯಡ್ಕ ಮಂಡಲ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಬ್ಲಾಕ್‌ ಕಾಂಗ್ರೆಸ್‌ ಕೋಶಾಧಿಕಾರಿ ಖಾದರ್‌ ಮಾನ್ಯ, ಕಾಸರಗೋಡು ಮಂಡಲ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮ್ಯಾಥ್ಯೂಸ್‌ ಮಾತನಾಡಿದರು. ಶಾಫಿ ಬದಿಯಡ್ಕ, ರಾಮ ಮಾನ್ಯ, ಕುಮಾರ ನಾಯರ್‌, ವಿನ್ಸೆಂಟ್‌, ಶಾಫಿ ಪಯ್ಯಲಡ್ಕ, ಸಿರಿಲ್‌ ಡಿ’ಸೋಜಾ, ಕೃಷಿಕ ಕಾಂಗ್ರೆಸ್‌ ಕಾರ್ಯಕರ್ತರು, ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಧರಣಿಗೆ ನೇತೃತ್ವ ನೀಡಿದರು.

ಬದಿಯಡ್ಕ ಮಂಡಲ ಕಾಂಗ್ರೆಸ್‌ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಶಿಜು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next