Advertisement

ಆಡು ಕಳವು : ನ್ಯಾಯಾಂಗ ಬಂಧನ

07:20 PM Jun 18, 2024 | Team Udayavani |

ಬದಿಯಡ್ಕ: ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 15ರಷ್ಟು ಆಡುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಹೋದರರಾದ ಮುಕ್ಕಂಪಾರದ ಅಬ್ದುಲ್ಲಾ ಅವರ ಪುತ್ರರಾದ ಮುಹಮ್ಮದ್‌ ಶಫೀಖ್‌(29) ಹಾಗೂ ಇಬ್ರಾಹಿಂ ಖಲೀಲ್‌ (24)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಇವರು ಸಂಚರಿಸುತ್ತಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಕಳವು ಮಾಡಿದ್ದ ಆಡುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನೀರ್ಚಾಲು ಪೂವಾಳಿಯ ಕ್ರಷರ್‌ ಸಮೀಪದ ಬಿ.ಎಂ.ಶರೀಫ್‌ ಮನೆಯಿಂದ ಆಡುಗಳ ಕಳವು ಮಾಡಿದ್ದರು.
ಕೆಲವು ಆಡುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದಿಕ್‌ ಸಾಲತ್ತಡ್ಕ ಎಂಬಾತನನ್ನು ಬಂಧಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next