Advertisement

ಪ್ರತಿಕೂಲ ಹವಾಮಾನ: ಪರ್ವತಾರೋಹಿಗಳ ಶವ ಮೇಲೆತ್ತುವ ಕಾರ್ಯಕ್ಕೆ ಅಡ್ಡಿ

09:50 AM Jun 06, 2019 | Sathish malya |

ಪಿತೋರ್‌ಗಢ : ಉತ್ತರಾಖಂಡದ ನಂದಾ ದೇವಿ ಪೂರ್ವ ಶಿಖರದ ಬಳಿ ಬಿದ್ದುಕೊಂಡಿರುವ ಪರ್ವತಾರೋಹಿಗಳ ಐದು ಮೃತ ದೇಹಗಳನ್ನು ಮೇಲೆತ್ತುವ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್‌ ಗಳ ಯತ್ನಕ್ಕೆ ಬಲವಾಗಿ ಬೀಸುತ್ತಿರುವ ಕುಳಿರ್ಗಾಳಿ ಅಡ್ಡಿಮಾಡಿದೆ.

Advertisement

ಅತ್ಯಂತ ದುರ್ಗಮ ಮತ್ತು ಕಡಿದಾಗಿರುವ ಈ ಶಿಖರ ಪ್ರದೇಶದಲ್ಲಿನ ಮೃತ ದೇಹಗಳನ್ನು ಮೇಲೆತ್ತುವ ಕಾರ್ಯಾಚರಣೆ ಇನ್ನೂ ಒಂದು ವಾರ ಕಾಲ ಸಾಗುವುದೆಂದು ಪಿತೋರ್‌ಗಢ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿ ಕೆ ಜೋಗದಂಡೆ ಹೇಳಿದ್ದಾರೆ.

ಇಂದು ಮೂರು ಬಾರಿ ಐಎಎಫ್ ಹೆಲಿಕಾಪ್ಟರ್‌ಗಳು ಕೈಗೊಂಡ ಹಾರಾಟದಲ್ಲಿ ಮೃತ ದೇಹಗಳು ಬಿದ್ದಿರುವ ತಾಣಗಳ ಮೇಲೆ ಸುತ್ತು ಬರುವುದು ಕೂಡ ಸಾಧ್ಯವಾಗಲಿಲ್ಲ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next