ಮಂಜುಳಮ್ಮ ಹೆಸರಿನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಗೆ ಕಳಪೆ ಆಹಾರ ಸಾಮಾಗ್ರಿ ವಿತರಿಸಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಕ್ರಿಯಾ ಸಮಿತಿ ಮತ್ತು ಮಹದೇವಪುರ, ವಡ್ಡರಹಳ್ಳಿ, ಮಿಂಡಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Advertisement
ಡಿಪೋ ನಂ. 103 ಮಂಜುಳಮ್ಮ ಹೆಸರಿನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಏಜೆಂಟ್ ಹರೀಶ್ ಪಡಿತರಚೀಟಿಗೆ ಕಳಪೆ ಸಾಮಾಗ್ರಿ ವಿತರಿಸಿಸುತ್ತಿದ್ದಾರೆ. ತಿಂಗಳು ಪೂರ್ತಿ ವಿತರಣೆ ಮಾಡಬೇಕೆಂದು ಆದೇಶವಿದ್ದರೂ ಸಹ
ಒಂದು ದಿನ ಮಾತ್ರ ವಿತರಿಸುತ್ತಿದ್ದಾರೆ. ಮನೆಗಳಲ್ಲಿ ಗ್ಯಾಸ್ ಇದೆ ಎಂದು ಹೇಳಿ ಮೊದಲೇ ಪಟ್ಟಿ ಮಾಡಿಕೊಂಡು ಸೀಮೆಎಣ್ಣೆ ಹಾಕದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಡ್ಡರಹಳ್ಳಿ ಗ್ರಾಮದಲ್ಲಿ 160 ಕಾರ್ಡು ದಾರರಿದ್ದು, ಪಕ್ಕದ ಹಳ್ಳಿಯನ್ನು ಸೇರಿಸಿ ವಡ್ಡರಹಳ್ಳಿ ಗ್ರಾಮದಲ್ಲಿ ಡಿಪೋ
ಸ್ಥಾಪಿಸಲು ಅನುಮತಿ ಕಲ್ಪಿಸಿಕೊಡ ಬೇಕೆಂದು ಅವರು ಆಗ್ರಹಿಸಿದರು.
Related Articles
Advertisement
ನಿಯೋಗದಲ್ಲಿ ದಲಿತ ಕ್ರಿಯಾ ಸಮಿತಿ ಜಿಲ್ಲಾ ಸಂಚಾಲಕ ಬಿ.ಎಂ. ರಮೇಶ್, ಗ್ರಾಮ ಪಂಚಾಯತಿ ಸದಸ್ಯ ವಡ್ಡರಹಳ್ಳಿ ಶಿವಪ್ಪ, ಶ್ರೀನಾಥ್, ಶಿವಕುಮಾರ್, ಗೋಪಾಲಕೃಷ್ಣ, ಮಂಜುನಾಥ್, ವೆಂಕಟರಾಮ್, ಮಹೇಶ್, ಚಂದ್ರಶೇಖರ್, ಗಜೇಂದ್ರ, ಕೃಷ್ಣಪ್ಪ, ಆನಂದ್, ವೆಂಕಟೇಶಪ್ಪ, ಮಹದೇವಪುರ ವೆಂಕಟೇಶ್ ಇತರರು ಉಪಸ್ಥಿತರಿದ್ದರು.