Advertisement

ಎಂಐಟಿ, ಮಾಹೆ ಬಿ.ಟೆಕ್ ವಿದ್ಯಾರ್ಥಿಗಳಿಗೆ “HBSF-MAHE EduEmpower ಸ್ಕಾಲರ್‌ಶಿಪ್

12:04 PM Apr 07, 2024 | Team Udayavani |

ಮಣಿಪಾಲ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲದ ಒಂದು ಘಟಕ ಸಂಸ್ಥೆ ಹಾಗು ಎಂಐಟಿ ಯ ಯಶಸ್ವಿ ಹಳೆಯ ವಿದ್ಯಾರ್ಥಿಯಾದ (1980) ಹರೀಶ್ ಶಾ ಪ್ರಾರಂಭಿಸಿದ ಚಾರಿಟಬಲ್ ಫೌಂಡೇಶನ್ ಹರೀಶ್ ಮತ್ತು ಬಿನಾ ಷಾ ಫೌಂಡೇಶನ್ (HBSF) ಜೊತೆಗೆ ಭಾರತದಾದ್ಯಂತ ದುರ್ಬಲ ಆರ್ಥಿಕ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಚ್ ಬಿಎಸ್ಎಫ್ -ಮಾಹೆ ಎಡುಎಂಪವರ್ ಸ್ಕಾಲರ್‌ಶಿಪ್ ಪ್ರಾರಂಭಿಸಲಾಗಿದೆ.

Advertisement

ವಿದ್ಯಾರ್ಥಿವೇತನವನ್ನು ಅಧಿಕೃತವಾಗಿ ಏಪ್ರಿಲ್ 6 ರಂದು ಎಂಐಟಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಯಿತು. ಸರಿಸುಮಾರು 240 ವಿದ್ಯಾರ್ಥಿಗಳಿಗೆ (ಒಂದು ವರ್ಷದಲ್ಲಿ ಸರಾಸರಿ 60 HBSF-MAHE ವಿದ್ಯಾರ್ಥಿಗಳಿಗೆ) ಒಟ್ಟು 12 ಕೋಟಿ ರೂಪಾಯಿ ಪ್ರತಿ ವರ್ಷ ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ. ಈ ವಿದ್ಯಾರ್ಥಿವೇತನವು 24-25 ಶೈಕ್ಷಣಿಕ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಇದು ಮೊದಲ ಬಾರಿಗೆ ಎಂಐಟಿಯ ಹಳೆಯ ವಿದ್ಯಾರ್ಥಿಯಿಂದ ಈ ಪ್ರಮಾಣದ ವಿದ್ಯಾರ್ಥಿವೇತನವನ್ನು ಸ್ಥಾಪಿಸಲಾಗಿದೆ.

ಎಂಐಟಿ 1980 ರ ವಿದ್ಯಾರ್ಥಿಯಾದ ಹರೀಶ್ ಷಾ ಅವರು 1986 ರಲ್ಲಿ ‘ಸಿಗ್ನೆಟ್’ ಸ್ಥಾಪಿಸಿದ್ದರು. ಇದು ಇಂದು ಜಾಗತಿಕ ಪ್ರಭಾವ ಮತ್ತು ಪ್ರವರ್ತಕ ಉತ್ಪನ್ನ ಕೊಡುಗೆಗಳೊಂದಿಗೆ ಭಾರತದ ಪ್ರಮುಖ ಔಷಧೀಯ ಕಚ್ಚಾ ವಸ್ತುಗಳ ವ್ಯಾಪಾರವಾಗಿ ನಿಂತಿದೆ. 2020 ರಲ್ಲಿ, ಸಿಗ್ನೆಟ್ IMCD N.V, ನೆದರ್ಲ್ಯಾಂಡ್ಸ್ ನ ಭಾಗವಾಯಿತು. ಶಾ ಕುಟುಂಬದ 2002 ರಲ್ಲಿ ಪ್ರಾರಂಭವಾದ ಹರೀಶ್ ಮತ್ತು ಬಿನಾ ಶಾ ಫೌಂಡೇಶನ್ (HBSF) ಶಿಕ್ಷಣ, ಆರೋಗ್ಯ, ಜೀವನೋಪಾಯಗಳು, ಲಿಂಗ ಸಮಾನತೆ, ಪರಿಸರ ಮತ್ತು ಸುಸ್ಥಿರತೆ ಮತ್ತು ಕಲೆ ಮತ್ತು ಸಂಸ್ಕೃತಿಯಂತಹ ಹಲವಾರು ಮುಖ್ಯವಾಹಿನಿಯ ಮತ್ತು ಉದಯೋನ್ಮುಖ ಸಾಮಾಜಿಕ ಸಮಸ್ಯೆಗಳನ್ನು ಬೆಂಬಲಿಸುತ್ತದೆ.

HBSF-MAHE-EduEmpower ವಿದ್ಯಾರ್ಥಿವೇತನ ಪಡೆಯಲು ಅರ್ಹತೆಯ ಮಾನದಂಡಗಳು

Advertisement

1 ಭಾರತದ ಯಾವುದೇ ರಾಜ್ಯ/ ಕೇಂದ್ರ ಸರ್ಕಾರಿ ಶಾಲೆ/ಪಿಯು ಕಾಲೇಜುಗಳಲ್ಲಿ 8–12ನೇ ತರಗತಿಯ (5 ವರ್ಷಗಳ ಶಾಲಾ ಶಿಕ್ಷಣ) ವ್ಯಾಸಂಗ ಮಾಡಿರಬೇಕು.

2 ಭೌತಶಾಸ್ತ್ರ, ಗಣಿತ ಮತ್ತು ಯಾವುದೇ ಐಚ್ಛಿಕ ಪತ್ರಿಕೆಯನ್ನು ವಿಷಯಗಳಾಗಿ ಹೊಂದಿರುವ ಸ್ಟ್ಯಾಂಡರ್ಡ್ 12 ಬೋರ್ಡ್ ಪರೀಕ್ಷೆಗಳಲ್ಲಿ 85% ಅಥವಾ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.

3 ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವೂ ರೂಪಾಯಿ 8 ಲಕ್ಷಗಳಿಗಿಂತ ಕಡಿಮೆಯಿರಬೇಕು.

4 ಮಾಹೆ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಯ ಅಖಿಲ ಭಾರತ ಶ್ರೇಣಿಯು 1–10,000 ನಡುವೆ ಇರಬೇಕು.

ಈ ಉಪಕ್ರಮದ ಕುರಿತು ಮಾತನಾಡಿದ ಮಾಹೆ ಉಪ ಚಾನ್ಸಲರ್, ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, “ಮಾಹೆ ಮತ್ತು ಎಂಐಟಿಯು ಹಳೆಯ ವಿದ್ಯಾರ್ಥಿಯಿಂದ ಘೋಷಿಸಿದ ಈ ವಿದ್ಯಾರ್ಥಿ ವೇತನವು, ಶೈಕ್ಷಣಿಕ ಸಂಸ್ಥೆಯ ಸಾಧನೆಯು, ಅದರ ಹಳೆಯ ವಿದ್ಯಾರ್ಥಿಗಳ ಸಾಧನೆ ಹಾಗು ಸಂಸ್ಥೆಯು ನೀಡುವ ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಸಾಕ್ಷಿಯಾಗಿದೆ” ಎಂದರು.

ಹರೀಶ್ ಶಾ ಅವರು ಮಾತನಾಡಿ, “ನನ್ನನ್ನು ಹಲವು ರೀತಿಯಲ್ಲಿ ರೂಪಿಸಿದ ಎಂಐಟಿ ಮತ್ತು ಮಣಿಪಾಲ್ ಸಮೂಹಕ್ಕಾಗಿ ನಾನು ಏನು ಮಾಡಬಹುದು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಎಂಐಟಿ ಯಲ್ಲಿನ ಈ ಸ್ಕಾಲರ್‌ಶಿಪ್ ಅಂತಹ ಒಂದು ಕ್ರಮವಾಗಿದೆ. ಇಲ್ಲಿ ನಾವು ಇನ್ನೂ ಅನೇಕ ಮಕ್ಕಳು ಸಮಗ್ರ ಮತ್ತು ತಾಂತ್ರಿಕವಾಗಿ ಉತ್ತಮ ಶಿಕ್ಷಣವನ್ನು ಹೊಂದಲು ಸಾಧ್ಯವಾಗುತ್ತದೆ, ಆ ಮೂಲಕ ನಾಳಿನ ಭಾರತದ ಉತ್ತಮ ಪ್ರಜೆಗಳಾಗಬಹುದು ಎಂದರು.

ಎಂಐಟಿಯ ನಿರ್ದೇಶಕ, ಕಮೋಡರ್ (ಡಾ.) ಅನಿಲ್ ರಾಣಾ ಅವರು ಹೇಳುವಂತೆ “ಎಲ್ಲಾ ಮಹತ್ವಾಕಾಂಕ್ಷಿ ಮನಸ್ಸುಗಳಿಗೆ ಸಮಾನ ಅವಕಾಶಗಳನ್ನು ನೀಡಲು ಬದ್ಧವಾಗಿರುವ ವಿಶ್ವವಿದ್ಯಾನಿಲಯವಾಗಿ, ಎಂಜಿನಿಯರಿಂಗ್‌ನಲ್ಲಿ ತಮ್ಮ ಕನಸುಗಳನ್ನು ಮುಂದುವರಿಸಲು ಆರ್ಥಿಕ ಹಿನ್ನೆಲೆಗಳು ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು HBSF-MAHE-EduEmpower ಸ್ಕಾಲರ್‌ಶಿಪ್ ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆ. ಹಳೆಯ ವಿದ್ಯಾರ್ಥಿಯು ಪ್ರಾಯೋಜಿಸಿದ ಈ ಕ್ರಮವು ಪ್ರತಿಭೆಯನ್ನು ಪೋಷಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಪ್ರತಿಭೆಗೆ ಯಾವುದೇ ಆರ್ಥಿಕ ಮಿತಿಗಳಿಲ್ಲ ಎಂದು ರುಜು ಪಡಿಸುತ್ತದೆ ಎಂದರು.

ಮಾಹೆ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, “ನಮ್ಮ ವಿದ್ಯಾಸಂಸ್ಥೆ ಅರ್ಹ ಅರ್ಜಿದಾರರಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದು ತಿಳಿಸಲು ನಾನು ಹೆಮ್ಮೆಪಡುತ್ತೇನೆ. ಶಿಕ್ಷಣವು ಕೇವಲ ಮಾಹಿತಿ ಸಂಪಾದನೆಗಿಂತ ಹೆಚ್ಚಾಗಿರುತ್ತದೆ; ಇದು ವ್ಯಕ್ತಿಗಳು ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ತಲುಪಲು ಅಧಿಕಾರ ನೀಡುವುದಾಗಿದೆ. ಈ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಉಜ್ವಲ ಭವಿಷ್ಯವನ್ನು ರಚಿಸಲು ನಾವು ಬಯಸುತ್ತೇವೆ. ಯಾಕೆಂದರೆ ಪ್ರತಿಯೊಬ್ಬ ಪ್ರತಿಭಾನ್ವಿತ ಮತ್ತು ಛಲವಂತ ವಿದ್ಯಾರ್ಥಿಯು ಅವರ ಆಕಾಂಕ್ಷೆಗಳನ್ನು ಪೂರೈಸುವ ಅವಕಾಶವನ್ನು ಹೊಂದಿರಬೇಕು ಎಂದು ನಾವು ಭಾವಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next