Advertisement

“ಪವಾರ್‌ ನಮ್ಮ ಗುರು ಅಲ್ಲ’

01:34 AM Sep 22, 2021 | Team Udayavani |

ಮುಂಬಯಿ: ಸ್ವಂತ ಪಕ್ಷ ಕಟ್ಟುವ ಸಲುವಾಗಿ ಕಾಂಗ್ರೆಸ್‌ ಬೆನ್ನಿಗೆ ಚೂರಿ ಇರಿದಂತಹ ನಂಬಿಕೆ ದ್ರೋಹಿ, ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಶಿವಸೈನಿಕರಿಗೆ ಯಾವತ್ತೂ ಗುರು ಆಗಲಾರರು ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ, ಶಿವಸೇನೆ ಮುಖಂಡ ಅನಂತ ಗೀತೆ ವಿವಾದ ಹುಟ್ಟುಹಾಕಿದ್ದಾರೆ.

Advertisement

ರಾಯಗಢದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್‌ ಅಘಾಡಿ ಸರಕಾರ ಕೇವಲ ಹೊಂದಾಣಿಕೆಯ ಸರಕಾರ’ ಎಂದೂ ಬಣ್ಣಿಸಿದ್ದಾರೆ. ಬೇಕಾದವರು ಶರದ್‌ ಪವಾರ್‌ ಅವರನ್ನು ಗುರು ಎಂದು ಹೇಳಿಕೊಳ್ಳಲಿ. ಆದರೆ ನಮಗೆ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆ ಅವರೇ ಗುರು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next