Advertisement

ಬಾಬರಿ: ಅವಶೇಷಕ್ಕಾಗಿ ಸುಪ್ರೀಂಗೆ ಮನವಿ?

10:05 AM Feb 08, 2020 | Hari Prasad |

ಅಯೋಧ್ಯೆ: ಧ್ವಂಸಗೊಂಡಿರುವ ಬಾಬರಿ ಮಸೀದಿಯ ಅವಶೇಷಗಳನ್ನು ನೀಡುವಂತೆ ಬಾಬರಿ ಮಸೀದಿ ಕ್ರಿಯಾ ಸಮಿತಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಿತಿ ಸಂಚಾಲಕ ಜಿಲಾನಿ, ಆಯೋಧ್ಯೆಯ ಮುಸ್ಲಿಮರು ಅದನ್ನು ವಿಲೇವಾರಿ ಮಾಡಲು ಜಮೀನು ಒದಗಿಸಲಿದ್ದಾರೆ. ಈ ಬಗ್ಗೆ ನಮ್ಮ ವಕೀಲ ರಾಜೀವ್‌ ಧವನ್‌ ಜತೆ ಚರ್ಚಿಸಲಾಗಿದೆ ಎಂದಿದ್ದಾರೆ.

ಕೇಂದ್ರ ರಚಿಸಿರುವ ಟ್ರಸ್ಟ್‌ ನಲ್ಲಿ ತಮ್ಮನ್ನು ಸೇರಿಸದೇ ಇರುವುದಕ್ಕೆ ರಾಮ ಜನ್ಮಭೂಮಿ ನ್ಯಾಸ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅವರನ್ನು ಸಂತೈಸುವ ನಿಟ್ಟಿನಲ್ಲಿ ಉತ್ತರಪ್ರದೇಶ ಬಿಜೆಪಿ ಘಟಕ ಮೂವರು ಪ್ರಮುಖ ನಾಯಕರನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next