Advertisement

Babaleshwar: ಸಾಲ ಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

12:28 AM May 13, 2024 | Team Udayavani |

ವಿಜಯಪುರ : ಭೀಕರ ಬರದ ಹಿನ್ನೆಲೆಯಲ್ಲಿ ಸಾಲ ಬಾಧೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

Advertisement

ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ರುಕ್ಮವ್ವ ದುಂಡಪ್ಪ ಬಾಡಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತ ಮಹಿಳೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಜಮೀನು ಹೊಂದಿರುವ ರುಕ್ಮವ್ವ ಸುಮಾರು 6 ಲಕ್ಷ ರೂ. ಸಾಲ ಮಾಡಿದ್ದಳು.

ಗದ್ಯಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1 ಲಕ್ಷ ರೂ., ವಿಜಯಪುರದ ಎಚ್.ಡಿ.ಎಫ್.ಸಿ. ಬ್ಯಾಂಕ್‌ನ 2.50 ಲಕ್ಷ ರೂ., ಬಬಲೇಶ್ವರ ಚೈತನ್ಯ ಫೈನಾನ್ಸ್ ನಲ್ಲಿ 50 ಸಾವಿರ ರೂ. ಹಾಗೂ ಖಾಸಗಿ 6 ಲಕ್ಷ ರೂ. ಸಾಲ ಸೇರಿದಂತೆ ರೈತ ಮಹಿಳೆ ರುಕ್ಮವ್ವ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.

ಕಳೆದ ವರ್ಷ ಭೀಕರ ಬರ ಆವರಿಸಿದ ಹಿನ್ನೆಲೆಯಲ್ಲಿ ಬೆಳೆಯೂ ಬಾರದೇ ರುಕ್ಮವ್ವ ಆದಾಯ ಬಾರದೇ ಸಾಲ ತೀರಿಸುವ ಬಗೆ ತಿಳಿಯದೇ ಕಂಗಾಲಾಗಿದ್ದರು. ಇದರಿಂದ ಸಾಲ ತೀರಿಸುವ ಬಗೆ ತಿಳಿಯದೇ ಭಾನುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಬಲೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸರ್ಕಾರ ಸೂಕ್ತ ಪರಿಹಾರ ವಿತರಿಸಬೇಕೆಂದು ಆಗ್ರಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next