Advertisement

Temple Visit: ಉಜ್ಜಯಿನಿಯ ಬಾಬಾ ಮಹಾಕಾಲ್ ದೇವಸ್ಥಾನಕ್ಕೆ ಸಚಿವ ವಿಶ್ವಜಿತ್ ರಾಣೆ ಭೇಟಿ

04:48 PM Sep 25, 2023 | Team Udayavani |

ಪಣಜಿ: ಗೋವಾ ರಾಜ್ಯ  ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಬಾಬಾ ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನಡೆದ ದಿವ್ಯ ಭಸ್ಮ ಆರತಿಯಲ್ಲಿ ಪಾಲ್ಗೊಂಡರು.

Advertisement

ಇದೇ ವೇಳೆ, 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ಬಾಬಾ ಮಹಾಕಾಲ್ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಸಚಿವ ವಿಶ್ವಜಿತ್ ರಾಣೆ ಮಾಹಿತಿ ನೀಡಿದ್ದಾರೆ. ಸಚಿವ ವಿಶ್ವಜಿತ್ ರಾಣೆ ರವರು ಬಾಬಾ ಮಹಾಕಾಲ್ ಅವರ ಆರತಿಯನ್ನು ವೀಕ್ಷಿಸಿದರು ಮತ್ತು ನಂತರ ಬಾಬಾ ಮಹಾಕಾಲ್‍ಗೆ ಪೂಜೆ ಸಲ್ಲಿಸಿದರು. ಪಂಡಿತ್ ಆಕಾಶ ಗುರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ರಾಣೆ-  ನಾನು ದೇವರ ದರ್ಶನಕ್ಕಾಗಿ ಬಾಬಾ ಮಹಾಕಾಲ್ ಅವರ ಆಸ್ಥಾನಕ್ಕೆ ಬಂದಿದ್ದೆ. ಮಹಾಕಾಲದ ದಿವ್ಯ ಭಸ್ಮ ಆರತಿಯನ್ನು ವೀಕ್ಷಿಸಿದ್ದೇನೆ. ಇಲ್ಲಿ ನಾನು ಬಾಬಾ ಮಹಾಕಾಲ್ ಅವರಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ನನ್ನ ಆಸೆಯನ್ನು ವ್ಯಕ್ತಪಡಿಸಿದೆ. ದೇಶಕ್ಕೆ ಮೋದಿ ಮತ್ತೊಮ್ಮೆ ಅಗತ್ಯವಿದೆ. ಬಾಬಾ ಮಹಾಕಲ್ ಅವರ ಆಶೀರ್ವಾದ ಶಾಶ್ವತವಾಗಿ ಉಳಿಯಲಿ. ದೇಶದ ಪ್ರಗತಿ ಮತ್ತು ಗೋವಾದ ಜನತೆ ಮುಂದೆ ಸಾಗಲಿ. ನನ್ನ ಭಾವನೆಗಳು ಬಾಬಾ ಮಹಾಕಾಲ್ ಅವರೊಂದಿಗೆ ಸಂಪರ್ಕ ಹೊಂದಿವೆ ಎಂದು ರಾಣೆ ಹೇಳಿದರು. ಹಾಗಾಗಿ ನಾನು ಮತ್ತೆ ಮತ್ತೆ ಬರುತ್ತೇನೆ. ಬಾಬಾ ಮಹಾಕಾಲನ ದರ್ಶನ ಪಡೆಯುವ ಸೂಚನೆ ಸಿಕ್ಕಾಗಲೆಲ್ಲ ನಾನು ಅವರ ಆಸ್ಥಾನಕ್ಕೆ ಬರುತ್ತೇನೆ ಎಂದರು.

ಇದನ್ನೂ ಓದಿ: Karnataka Politics; ಇದು ಸಾರಾಯಿ ಗ್ಯಾರಂಟಿ ಸರ್ಕಾರ: ಬಸವರಾಜ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next