Advertisement

ರೈತ ಮುಖವಾಡ ಧರಿಸಿದವರಿಂದ ಮುಷ್ಕರ

04:34 PM Dec 09, 2020 | Suhan S |

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಪರ ಕಾಯ್ದೆಗಳನ್ನು ವಿರೋಧಿಸಿ ಮುಷ್ಕರ ಮಾಡುತ್ತಿರುವವರು ನಿಜವಾದ ರೈತರಲ್ಲ. ಮುಖವಾಡ ಹೊತ್ತವರು, ಇದೊಂದು ರಾಜಕೀಯ ಕುತಂತ್ರವಾಗಿದೆ. ರೈತರನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಮತ್ತು ಕೃಷಿ ಕ್ಷೇತ್ರ ಸುಧಾರಣೆಗಾಗಿಯೇರೈತ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದರೈತರಿಗೆ ಅನುಕೂಲವಾಗುತ್ತದೆಯೇ ಹೊರತು ಯಾವುದೇ ಅನಾನುಕೂಲ ಆಗುವುದಿಲ್ಲ ಎಂದರು.

ವಾಮಪಂಥದವರು, ಕಮ್ಯೂನಿಸ್ಟರು, ಪ್ರಗತಿಪರರು, ಎಡಪಂಥಿಯರು ಮಾತ್ರ ಇಂತಹ ಮಸೂದೆಗಳನ್ನುಒಪ್ಪುವುದಿಲ್ಲ. ಇವರ್ಯಾರಿಗೂ ಕೃಷಿ ಕ್ಷೇತ್ರದ ಅಭಿವೃದ್ಧಿಹಿಡಿಸುವುದಿಲ್ಲ. ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ.ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರ ಬೆಳೆ ಖರೀದಿ  ಮಾಡುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಕಾಯ್ದೆಗಳಲ್ಲೂ ಸ್ಪಷ್ಟತೆ ಇದೆ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಕೇರಳ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿಲ್ಲ ಎಂದು ದೂರಿದರು.

ಖಲಿಸ್ಥಾನ್‌ ಚಳವಳಿಯ ಮೂಲಕ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಕೆನಡಾ ಮತ್ತು ಲಂಡನ್‌ ನಲ್ಲಿರುವ ವಾಮಪಂಥಿಯರು ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಮಸೂದೆಗಳನ್ನು ಎಲ್ಲ ಕಡೆ ಸ್ವಾಗತ ಮಾಡಲಾಗಿದೆ. ಆದರೆ ಕೆಲವು ದಲ್ಲಾಳಿಗಳು, ಮಧ್ಯವರ್ತಿಗಳು ಮತ್ತು ರಾಜಕೀಯ ಹಿತಾಸಕ್ತಿಗಳು ಸೇರಿಕೊಂಡು ಕೇಂದ್ರ ಸರ್ಕಾರಕ್ಕೆಕೆಟ್ಟ ಹೆಸರು ತರುವ ಪಿತೂರಿಯಿಂದ ಈ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದೊಂದು ರಾಜಕೀಯ ಕುತಂತ್ರವಾಗಿದ್ದು, ರೈತರನ್ನು ದಾರಿತಪ್ಪಿಸಲಾಗುತ್ತಿದೆ. ರೈತರುಇದಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.

Advertisement

ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲವೇ ಆಗಿದೆ. ಒಳಗೆ ಹೊರಗೆ ಎಲ್ಲಾದರೂ ಅವರು ವ್ಯವಹಾರ ಮಾಡಬಹುದು. ತಮ್ಮ ಉತ್ಪನ್ನಗಳನ್ನು ಲಾಭಕ್ಕೆ ಮಾರಿಕೊಳ್ಳಬಹುದು. ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೊಟ್ಯಂತರ ರೂ.ಗಳನ್ನು ಖರ್ಚು ಮಾಡುತ್ತಿದೆ. ಗೊಬ್ಬರದ ಸಮಸ್ಯೆ ಬಗೆಹರಿಸಿದೆ. ಬಿತ್ತನೆ ಬೀಜ ನೀಡಿದೆ. ಕಿಸಾನ್‌ ಕಾರ್ಡ್‌, ಫಸಲ್‌ ಬಿಮಾ, ಹನಿ ನೀರಾವರಿ, ಕಿಸಾನ್‌ ಸಮ್ಮಾನ್‌ ಮುಂತಾದ ಯೋಜನೆಗಳ ಮೂಲಕ ರೈತರ ಬಾಳನ್ನು ಬೆಳಗಿಸುತ್ತಿದೆ ಎಂದರು. ಇದರ ಪರಿಣಾಮ ರೈತನ ಆದಾಯ ಕೂಡ ಹೆಚ್ಚಿದೆ. 2014 ರಲ್ಲಿ 250 ಮಿಲಿಯನ್‌ ಟನ್‌ ಉತ್ಪಾದನೆ ಇದ್ದರೆ. 2020ರಲ್ಲಿ ಅದು 291ಮಿಲಿಯನ್‌ ಟನ್‌ಗೆ ಹೆಚ್ಚಿದೆ. ಅಂದಿಗೂ ಇಂದಿಗೂ ಶೇ.30 ರಷ್ಟು ಆದಾಯ ಹೆಚ್ಚಿದೆ. ಎಂಆರ್‌ಪಿ ಬಗ್ಗೆಯೂ ಯಾವ ಅನುಮಾನಗಳು ಬೇಡ ಎಂದರು.

ಶಾಂತಿ ಸುವ್ಯವಸ್ಥೆಗಾಗಿ ನಿಷೇಧಾಜ್ಞೆ  :

ಇತ್ತೀಚೆಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿದ ಅವರು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು. ಗಲಾಟೆ ನಂತರ ಶಿವಮೊಗ್ಗದಲ್ಲಿ 144 ಸೆಕ್ಷನ್‌ ವಿನಾಕಾರಣ ವಿಸ್ತರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನೂ ಇಲ್ಲಯಾವುದೇ ಗಲಾಟೆಯಾಗದಂತೆ ಶಾಂತಿಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶ ಇದರ ಹಿಂದಿದೆ. ಪೊಲೀಸರು ಕೂಡ ಗುಪ್ತಚರ ವರದಿಗಳನ್ನು ಆಧರಿಸಿ ಕೆಲಸ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಪ್ರಮುಖರಾದ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಗಿರೀಶ್‌ ಪಟೇಲ್‌,ಡಿ.ಎಸ್‌.ಅರುಣ್‌, ಸಾಲೇಕೊಪ್ಪ ರಾಮಚಂದ್ರ,ರಾಮು, ಗಂಗಾಧರ್‌, ಶಿವರಾಜ್‌, ಪ್ರಸನ್ನ, ಕೃಷ್ಣೋಜಿರಾವ್‌,ಸತೀಶ್‌, ಸುನಿತಾ ಅಣ್ಣಪ್ಪ ಸೇರಿದಂತೆ ಹಲವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next