Advertisement

ವಾರಾಣಸಿ ತಲುಪಿದ ಆಝಾನ್‌- ಚಾಲೀಸಾ ಗಲಾಟೆ

09:54 PM Apr 14, 2022 | Team Udayavani |

ಲಕ್ನೋ: ಕರ್ನಾಟಕದಲ್ಲಿ ಶುರುವಾದ ಆಝಾನ್‌ ವಿವಾದ ಈಗ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಗೆ ತಲುಪಿದೆ.

Advertisement

ಅಲ್ಲಿನ ಕೆಲ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು ಮುಸ್ಲಿಮರ ಆಝಾನ್‌ಗೆ ಪ್ರತಿಯಾಗಿ ಹನುಮಾನ್‌ ಚಾಲೀಸಾ, ಇನ್ನಿತರೆ ಮಂತ್ರಪಠಣ ಮಾಡಲು ಹಿಂದೂಗಳಿಗೆ ಕರೆ ನೀಡಿದ್ದಾರೆ.

ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್‌ ಮಾಡುವಾಗ ಜೋರಾಗಿ ಮೈಕ್‌ ಹಾಕಿಕೊಂಡು ಆಝಾನ್‌ ಮಾಡಿದರೆ, ನಾವೂ ಅದೇ ಸಮಯದಲ್ಲಿ ಮೈಕ್‌ ಹಾಕಿಕೊಂಡು ಹನುಮಾನ್‌ ಚಾಲೀಸಾ ಹೇಳುತ್ತೇವೆ ಎಂದಿದ್ದಾರೆ.

ಅದಕ್ಕಾಗಿ ವಾರಾಣಸಿಯ ಹಿಂದೂಗಳು ತಮ್ಮ ಮನೆಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next