Advertisement

ನವೆಂಬರ್‌ 1ಕ್ಕೆ “ಆಯುಷ್ಮಾನ್‌ ಭವ’

10:05 AM Sep 18, 2019 | Lakshmi GovindaRaju |

ಶಿವರಾಜಕುಮಾರ್‌ ಲಂಡನ್‌ನಿಂದ ವಾಪಾಸ್‌ ಬಂದು ಈಗ “ಭಜರಂಗಿ-2′ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ನಡುವೆಯೇ ಶಿವರಾಜಕುಮಾರ್‌ ಅವರ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಆಯುಷ್ಮಾನ್‌ ಭವ’. ಶಿವರಾಜಕುಮಾರ್‌, ಪಿ.ವಾಸು ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಆಯುಷ್ಮಾನ್‌ ಭವ’ ಚಿತ್ರ ನವೆಂಬರ್‌ 1 ರಂದು ಬಿಡುಗಡೆಯಾಗುತ್ತಿದೆ.

Advertisement

ಈ ಮೂಲಕ ರಾಜ್ಯೋತ್ಸವಕ್ಕೆ ಶಿವರಾಜಕುಮಾರ್‌ ಅವರ ಸಿನಿಮಾ ಬಿಡುಗಡೆಯಾದಂತಾಗುತ್ತದೆ. ಈಗಾಗಲೇ ಪಿ.ವಾಸು ಹಾಗೂ ಶಿವಣ್ಣ ಕಾಂಬಿನೇಶನ್‌ನಲ್ಲಿ ಬಂದಿರುವ “ಶಿವಲಿಂಗ’ ಚಿತ್ರ ಹಿಟ್‌ ಆಗಿತ್ತು. ಈಗ ಮತ್ತೆ ಆ ಜೋಡಿಯ ಸಿನಿಮಾ ಬರುತ್ತಿರುವುದರಿಂದ ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ. ಶಿವಣ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಮುಖ್ಯವಾಗಿ ಎರಡು ಕಾರಣ, ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಆದರೆ, ಮತ್ತೊಂದು ಮ್ಯೂಸಿಕಲ್‌ ಸಿನಿಮಾ.

“ಆಯುಷ್ಮಾನ್‌ ಭವ’ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಕೊಡಲಾಗಿದ್ದು, ಚಿತ್ರದ ಹಾಡುಗಳು ಹಿಟ್‌ ಆಗುತ್ತವೆ ಎಂಬ ವಿಶ್ವಾಸ ಶಿವರಾಜಕುಮಾರ್‌ ಅವರಿಗಿದೆ. ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರವಾಗಿ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವ ವಿಶ್ವಾಸ ಕೂಡಾ ಇದೆ. “ಆಯುಷ್ಮಾನ್‌ ಭವ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ವಾಸು ಅವರು ಸ್ಟೈಲ್‌ ಸಿನಿಮಾ. ಇತ್ತೀಚೆಗೆ ಬಂದ ನನ್ನ ಸಿನಿಮಾಗಳೆಲ್ಲವೂ ಆ್ಯಕ್ಷನ್‌ನಿಂದ ಕೂಡಿತ್ತು. ಆದರೆ, “ಆಯುಷ್ಮಾನ್‌ ಭವ’ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌.

ತುಂಬಾ ಗ್ಯಾಪ್‌ನ ನಂತರ ಬರುತ್ತಿರುವ ನನ್ನ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಜೊತೆಗೆ ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚಿನ ಒತ್ತುಕೊಡಲಾಗಿದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ. ಚಿತ್ರದಲ್ಲಿ ಅಂಡರ್‌ವಾಟರ್‌ ಫೈಟ್‌ ಕೂಡಾ ಇದ್ದು, ಇದು ಕೂಡಾ ಸಿನಿಮಾದ ಹೈಲೈಟ್ಸ್‌. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊದಲು “ದ್ರೋಣ’ ಚಿತ್ರ ತೆರೆಕಾಣಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ “ದ್ರೋಣ’ ಸಿನಿಮಾ ಮುಂದಕ್ಕೆ ಹೋಗಿದೆ. ಈಗ “ಆಯುಷ್ಮಾನ್‌ ಭವ’ ಬರುತ್ತಿದ್ದು, ದ್ವಾರಕೀಶ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next