Advertisement

ಅಮೃತಬಳ್ಳಿ ಆರೋಗ್ಯಕ್ಕೆ ಒಳ್ಳೆಯದು: ಆಯುಷ್‌ ಸ್ಪಷ್ಟನೆ

05:16 PM Feb 18, 2022 | Team Udayavani |

ನವದೆಹಲಿ: ಅಮೃತಬಳ್ಳಿಯ ಎಲೆಗಳ ಸೇವನೆಯಿಂದ ಯಕೃತ್‌(ಲಿವರ್‌) ಸಮಸ್ಯೆಗಳು ಎದುರಾಗುತ್ತವೆ ಎಂಬುದಾಗಿ ಹರಡಿರುವ ವದಂತಿಗಳಿಗೆ ಕೇಂದ್ರ ಆಯುಷ್‌ ಇಲಾಖೆ ತೆರೆ ಎಳೆದಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಇಲಾಖೆ, ಅಮೃತಬಳ್ಳಿಯ ಎಲೆಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದೆ.

Advertisement

ಅಮೃತಬಳ್ಳಿ ಸೇವನೆಯಿಂದ ಯಕೃತ್‌ ಸಮಸ್ಯೆ ಬರುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಇಲಾಖೆ, ಅಮೃತಬಳ್ಳಿಯುವ ಯಕೃತ್ತನ್ನು ಹಾಳು ಮಾಡುವಂಥ ಯಾವುದೇ ವಿಷದ ಪದಾರ್ಥವನ್ನು ಹೊರಸೂಸುವುದಿಲ್ಲ. ಅಮೃತಬಳ್ಳಿಯ ಬಗ್ಗೆ ಬಂದಿರುವ ಇಂಥ ವದಂತಿಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಅವುಗಳಿಂದ ಈ ವಿಚಾರ ತಿಳಿದುಬಂದಿದೆ. ಅಲ್ಲದೆ, ಅಮೃತಬಳ್ಳಿಯ ಸೇವನೆ ದೇಹಕ್ಕೆ ನವಚೈತನ್ಯ ತುಂಬುತ್ತದೆ ಎಂದು ಆಯುರ್ವೇದದಲ್ಲೇ ತಿಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next