Advertisement

Devotion;1,001 ಮಂದಿಗೆ ಶ್ರೀರಾಮನ ಭಕ್ತನಿಂದ ಉಚಿತ ಹಚ್ಚೆ !

12:02 AM Jan 14, 2024 | Team Udayavani |

ನಾಗಪುರ: ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ಇಡೀ ದೇಶದಲ್ಲಿ ಸಂಭ್ರಮ ಮನೆಮಾಡಿದೆ. ರಾಮ ಭಕ್ತರು ಭಜನೆ, ಸಂಕೀರ್ತನೆ ಮಾಡುವುದರ ಮೂಲಕ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಇದಕ್ಕೆ ಸೇರ್ಪಡೆಯೆಂಬಂತೆ ಇದೀಗ ಜನರು ತಮ್ಮ ಕೈಗಳ ಮೇಲೆ ಶ್ರೀರಾಮನ ಹಚ್ಚೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಶ್ರೀರಾಮನ ಮೇಲಿನ ಭಕ್ತಿಯನ್ನು ತೋರಿಸಿದ್ದಾರೆ.

Advertisement

ಹೌದು ನಾಗಪುರದ ಟ್ಯಾಟೂ ಕಲಾವಿದ ಹೃತಿಕ್‌ ದಾರೋಡ್‌ ಎಂಬವರು ಕಳೆದ ಹಲವು ವರ್ಷಗಳಿಂದ ಟ್ಯಾಟೂ ಹಾಕುವುದನ್ನು ತಮ್ಮ ಕಸುಬಾನ್ನಾಗಿಸಿಕೊಂಡಿದ್ದಾರೆ. ಶ್ರೀರಾಮನ ಭಕ್ತನಾಗಿರುವ ಇವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ವಿಶೇಷ ಸಂದರ್ಭದಲ್ಲಿ ಜನರ ಕೈಗಳ ಮೇಲೆ ಪ್ರಭು ಶ್ರೀರಾಮನ ಹೆಸರಿನ ಹಚ್ಚೆಗಳನ್ನು ಹಾಕುತ್ತಿದ್ದಾರೆ. ಅಲ್ಲದೇ ಮೊದಲು ನೋಂದಾಯಿಸಿಕೊಂಡ 1,001 ಮಂದಿಗೆ ಉಚಿತವಾಗಿ ಹಚ್ಚೆ ಹಾಕಲಾಗುವುದು ಎಂದು ಘೋಷಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಇವರ ಅಂಗಡಿಯ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next