Advertisement

ಅಯೋಧ್ಯೆ ಸಂಧಾನ  ಮಾರ್ಗ ಮುಕ್ತಾಯ: ಪಾಂಡೆ

09:36 AM Nov 07, 2018 | Team Udayavani |

ಅಯೋಧ್ಯೆ: ಅಯೋಧ್ಯಾ ವಿವಾದವನ್ನು ಸಮುದಾಯಗಳ ನಡುವೆ ಸಂಧಾನ ಮೂಲಕ ಬಗೆಹರಿಸುವ ಆಯ್ಕೆ ಕೊನೆಗೊಂಡಿದೆ ಮತ್ತು ಬಿಜೆಪಿ ಸಾಂವಿಧಾನಿಕ ಅಥವಾ ಶಾಸನಾತ್ಮಕ ವಿಧಾನ ಮೂಲಕ ಅಲ್ಲಿ ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಪಕ್ಷದ ಫೈಜಾಬಾದ್‌ ಜಿಲ್ಲಾ ಅಧ್ಯಕ್ಷ ಅವಧೇಶ್‌ ಪಾಂಡೆ ಹೇಳಿದ್ದಾರೆ. 

Advertisement

ಆಯೋಧ್ಯೆಯ ಹೆಚ್ಚಿನ ಜನರು ಮಂದಿರ ನಿರ್ಮಾಣವಾಗುವುದನ್ನು ಬಯಸುತ್ತಿದ್ದಾರೆ, ಏಕೆಂದರೆ ಇದೊಂದು ನಂಬಿಕೆಯ ಪ್ರಶ್ನೆಯಾಗಿದೆ. ಬಿಜೆಪಿಯೊಂದೇ ಜನರಿಗಾಗಿ ಈ ವಿಚಾರವನ್ನು ಪ್ರಸ್ತಾವಿಸುತ್ತಿದೆ ಎಂದವರು ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಹೇಳಿದರು. ಈ ಹಿಂದೆ ಸಮುದಾಯಗಳ ನಡುವೆ ಸಂಧಾನಕ್ಕೆ ಆಯ್ಕೆಯೊಂದು ಇತ್ತು ಮತ್ತು ಕೋರ್ಟು ಕೂಡ ಅದಕ್ಕೆ ಅವಕಾಶ ನೀಡಿತ್ತು. ಆದರೆ ಆದು ಫ‌ಲಪ್ರದವಾಗಲಿಲ್ಲ ಎಂದವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next