Advertisement

ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವ

12:26 AM Nov 04, 2021 | Team Udayavani |

ಹೊಸದಿಲ್ಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದ್ದು, ಕೇಂದ್ರ ನಾಯಕರು ಹಾಗೂ ರಾಜ್ಯ ನಾಯಕರೂ ಕೂಡ ಹಬ್ಬಕ್ಕಾಗಿ ವಿಶೇಷ ಆಚರಣೆಗಳಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ದೀಪ ಬೆಳಗುವುದರಿಂದ ಹಿಡಿದು, ಪ್ರಧಾನಿಯವರು ಯೋಧರೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದೆಲ್ಲವೂ ಈ ಬಾರಿಯ ವಿಶೇಷವಾಗಿದೆ.

Advertisement

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ. ಸರಯೂ ನದಿ ತೀರದಲ್ಲಿ 9 ಲಕ್ಷ ಸೇರಿದಂತೆ ಅಯೋಧ್ಯೆಯಲ್ಲಿ ಈ ವರ್ಷ 12 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ರಾಮ್‌ಲೀಲಾ, 3ಡಿ ಹೊಲೋ ಗ್ರಫಿಕ್‌ ,ಲೇಸರ್‌ ಶೋ, ಸುಡುಮದ್ದುಗಳು ಸೇರಿದಂತೆ ಅನೇಕ ರೀತಿಯ ವಿಶೇಷತೆಗಳನ್ನು ಈ ಬಾರಿ ಅಯೋಧ್ಯೆಯಲ್ಲಿ ಕಾಣಬಹುದು.

ಯೋಧರೊಂದಿಗೆ ಮೋದಿ ದೀಪಾವಳಿ: ಪ್ರಧಾನಿ ನರೇಂದ್ರ ಮೋದಿ ಯವರು ಪ್ರತೀ ಬಾರಿಯಂತೆ ಈ ಬಾರಿ ಯೂ ದೀಪಾವಳಿ ಹಬ್ಬವನ್ನು ಯೋಧರೊಂದಿಗೆ ಆಚರಿಸಲಿದ್ದಾರೆ. ಅವರು ಗುರುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಯೋಧರೊಂ ದಿಗೆ ದೀಪದ ಹಬ್ಬ ಆಚರಿಸಲಿದ್ದಾರೆ.

ಇದನ್ನೂ ಓದಿ:ಕೇದರಾನಾಥಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್‌ ಫುಲ್ ಟ್ರೋಲ್‌

ಮಂದಿರದ ಪರ ಧ್ವನಿಯೆತ್ತುವುದು ಅಪರಾಧವಾಗಿತ್ತು: ಯೋಗಿ
31 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಭಕ್ತರು, ಕರಸೇವಕರ ಮೇಲೆ ಗುಂಡು ಹಾರಿಸಲಾಗಿತ್ತು. ಜೈ ಶ್ರೀ ರಾಮ್‌ ಎಂದು ಘೋಷಣೆ ಕೂಗುವುದು ಅಪರಾಧವಾಗಿತ್ತು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ದೀಪೋತ್ಸವದಲ್ಲಿ ಮಾತನಾಡಿದ ಅವರು, “ಪ್ರಜಾಪ್ರಭುತ್ವ ಹಾಗೂ ಜನರ ಶಕ್ತಿಯಿಂದಾಗಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದ ಜನರೇ ಈಗ ಮಂಡಿಯೂರುವಂತಾಗಿದೆ. ನೀವು ನಿಮ್ಮ ಈ ಶಕ್ತಿಯ ಪ್ರದರ್ಶನವನ್ನು ಮುಂದುವರಿಸಿದ್ದೇ ಆದಲ್ಲಿ, ಅವರು ಮತ್ತು ಅವರ ಕುಟುಂಬ ಮುಂದಿನ ಕರಸೇವೆಗೆ ಸರತಿಯಲ್ಲಿ ನಿಲ್ಲಲಿದೆ. ಮುಂದಿನ ಕರಸೇವೆಯ ವೇಳೆ ಬುಲೆಟ್‌ ಅಲ್ಲ, ಬದಲಿಗೆ ಶ್ರೀರಾಮ ಮತ್ತು ಶ್ರೀಕೃಷ್ಣನ ಅನುಯಾಯಿಗಳ ಮೇಲೆ ಪುಷ್ಪಮಳೆ ಸುರಿಸಲಾಗುವುದು’ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next