Advertisement

Ayodhya; ಶ್ರೀರಾಮನ ಪೂಜೆಗೆ ಧಾರವಾಡದ ಕುರುಬರ ಕಂಬಳಿ ಉಡುಗೊರೆ

11:10 PM Jan 03, 2024 | Team Udayavani |

ಧಾರವಾಡ : ಜಗತ್ತೇ ಕುತೂಹಲದಿಂದ ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆಯನ್ನ ಬೆರಗುಗಣ್ಣಿಂದ ನೋಡುತ್ತಿದೆ. ಮೈಸೂರಿನ ಶಿಲ್ಪಿ ರಾಮ ಲಲ್ಲಾನ ಮೂರ್ತಿಯನ್ನು ಕೆತ್ತನೆ ಮಾಡಿದ್ದು ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗುತ್ತಿದೆ.ಇದೀಗ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ ಕಂಬಳಿ ಹೋಗುತ್ತಿದೆ.

Advertisement

ಇಂತಹೊಂದು ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತರುವಂತಿದೆ. ಮಂದಿರದ ಉದ್ಘಾಟನೆಗಾಗಿ ಧಾರವಾಡದ ಕಮಲಾಪುರ ಭಾಗದ ಪ್ರಗತಿಪರರು ಹಿರಿಯರು ಆಗಿರುವ ಸುಭಾಷ ಬಸಪ್ಪ ರಾಯಪ್ಪನವರ ಅವರು ಎರಡು ಕಂಬಳಿಗಳನ್ನು ಕೊಟ್ಟಿದ್ದಾರೆ.

ವಿಶ್ವ ಹಿಂದೂ ಪರಿಷತ್ ನ ಹಿರಿಯರಾಗಿರುವ ಡಾ.ಎಸ್. ಆರ ರಾಮನಗೌಡರ ಹಾಗೂ ಮಾಜಿ ಮಹಾಪೌರರು ಆಗಿರುವ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ನೀಡಿದ್ದು, ಆ ಕಂಬಳಿಗಳನ್ನು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಹ್ಲಾದ್ ಜೋಶಿಯವರ ಮೂಲಕ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮನ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುವುದರಿಂದ ಉತ್ತರ ಕರ್ನಾಟಕದ ಕೊಡುಗೆ ಕೊಟ್ಟಂತೆ ಆಗಿದೆ. ರಾಮನ ಪೂಜೆಯಲ್ಲಿ ಕಂಬಳಿಗಳ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದು ವಿಶ್ವಹಿಂದೂಪರಿಷತ್ ನ ಹಿರಿಯರು ಕಂಬಳಿಗಳನ್ನ ಪಡೆದು ಶುಭ ಹಾರಿಸಿದರು.

ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ, ಈರಪ್ಪ ಗೌಡಪ್ಪನವರ, ಎಲ್ಲಪ್ಪ‌ ಹೊಟ್ಟಿ , ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ, ಈರಯ್ಯ ರಾಮಯ್ಯನವ, ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಹಾಗೂ ಸ್ಥಳೀಯರು ಹಿರಿಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next