Advertisement

ಅಯೋಧ್ಯೆ ಪ್ರಕರಣ: ಅರ್ಜಿ ವಿಚಾರಣೆಗೆ ನಿರ್ಧಾರ

12:30 AM Feb 16, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಸಮೀಪದ 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು 1993ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಕಾನೂನಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸಮ್ಮತಿಸಿದೆ. 

Advertisement

ಸಂವಿಧಾನದ ಪೀಠದಲ್ಲಿ ವಿಚಾರಣೆಗೆ ಬಾಕಿ ಇರುವ ಮುಖ್ಯ ಪ್ರಕರಣದೊಂದಿಗೆ ಈ ಅರ್ಜಿಯನ್ನೂ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಸೇರಿಸಿದ್ದಾರೆ. ವಿವಾದವಿಲ್ಲದ 67 ಎಕರೆ ಭೂಮಿಯನ್ನು ಮೂಲ ಮಾಲಕರಿಗೆ ಹಸ್ತಾಂತರಿಸುವ ಕುರಿತು ಅನುಮತಿ ನೀಡುವಂತೆ ಕೇಂದ್ರ ಸರಕಾರ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ವಕೀಲರಾದ ಶಿಶಿರ್‌ ಚತುರ್ವೇದಿ ಮತ್ತು ಸಂಜಯ್‌ ಮಿಶ್ರಾ ಈ ಅರ್ಜಿ ಸಲ್ಲಿಸಿದ್ದಾರೆ. ಧಾರ್ಮಿಕ ಉದ್ದೇಶದ ಭೂಮಿಯನ್ನು ಕೇಂದ್ರ ಸರಕಾರ ಸ್ವಾಧೀನಪಡಿಸಿಕೊಳ್ಳಲಾಗದು. ಭೂಮಿಯು ರಾಜ್ಯದ ಅಧೀನಕ್ಕೊಳಪಟ್ಟಿದ್ದು, 1993ರಲ್ಲಿ  ರೂಪಿಸಲಾದ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕೇಂದ್ರ ಸರಕಾರದ ಅರ್ಜಿಯ ಬೆನ್ನಲ್ಲೇ ಇಬ್ಬರು ವಕೀಲರಿಂದ ಸುಪ್ರೀಂ ಕೋರ್ಟ್‌ಗೆ ಮೊರೆ
ಮೂಲ ಪ್ರಕರಣದಲ್ಲಿ ಅರ್ಜಿ ವಿಲೀನಗೊಳಿಸಿದ ಕೋರ್ಟ್‌
1993ರಲ್ಲಿ  ಜಾರಿಗೊಳಿಸಿದ ಕಾನೂನಿನ  ಸಾಂವಿಧಾನಿಕ  ಮಾನ್ಯತೆ ಪ್ರಶ್ನಿಸಿ ಅರ್ಜಿ

Advertisement

Udayavani is now on Telegram. Click here to join our channel and stay updated with the latest news.

Next