Advertisement
ಸಂವಿಧಾನದ ಪೀಠದಲ್ಲಿ ವಿಚಾರಣೆಗೆ ಬಾಕಿ ಇರುವ ಮುಖ್ಯ ಪ್ರಕರಣದೊಂದಿಗೆ ಈ ಅರ್ಜಿಯನ್ನೂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸೇರಿಸಿದ್ದಾರೆ. ವಿವಾದವಿಲ್ಲದ 67 ಎಕರೆ ಭೂಮಿಯನ್ನು ಮೂಲ ಮಾಲಕರಿಗೆ ಹಸ್ತಾಂತರಿಸುವ ಕುರಿತು ಅನುಮತಿ ನೀಡುವಂತೆ ಕೇಂದ್ರ ಸರಕಾರ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ವಕೀಲರಾದ ಶಿಶಿರ್ ಚತುರ್ವೇದಿ ಮತ್ತು ಸಂಜಯ್ ಮಿಶ್ರಾ ಈ ಅರ್ಜಿ ಸಲ್ಲಿಸಿದ್ದಾರೆ. ಧಾರ್ಮಿಕ ಉದ್ದೇಶದ ಭೂಮಿಯನ್ನು ಕೇಂದ್ರ ಸರಕಾರ ಸ್ವಾಧೀನಪಡಿಸಿಕೊಳ್ಳಲಾಗದು. ಭೂಮಿಯು ರಾಜ್ಯದ ಅಧೀನಕ್ಕೊಳಪಟ್ಟಿದ್ದು, 1993ರಲ್ಲಿ ರೂಪಿಸಲಾದ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಮೂಲ ಪ್ರಕರಣದಲ್ಲಿ ಅರ್ಜಿ ವಿಲೀನಗೊಳಿಸಿದ ಕೋರ್ಟ್
1993ರಲ್ಲಿ ಜಾರಿಗೊಳಿಸಿದ ಕಾನೂನಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ