Advertisement

ಕಾಂದಿವಲಿ ಕನ್ನಡ ಸಂಘದಿಂದ ಶೈಲಜಾ ವಿ. ಗಿರ್ಕರ್‌ಗೆ ಅಭಿನಂದನೆ

04:44 PM Mar 23, 2017 | Team Udayavani |

ಮುಂಬಯಿ: ಇತ್ತೀಚೆಗೆ ನಡೆದ ಬಿಎಂಸಿ ಚುನಾವಣೆಯಲ್ಲಿ ಡಹಾನುಕರ್‌ವಾಡಿ ಕ್ಷೇತ್ರದಿಂದ ಸತತ ಐದನೇ ಬಾರಿ ವಿಜೇತರಾದ ಬಿಜೆಪಿ ಅಭ್ಯರ್ಥಿ, ಹಿರಿಯ ರಾಜಕಾರಣಿ ಶೈಲಜಾ ವಿ. ಗಿರRರ್‌ ಅವರನ್ನು  ಕಾಂದಿವಲಿ ಕನ್ನಡ ಸಂಘದ ಪದಾಧಿಕಾರಿಗಳು ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

Advertisement

ಹಲವು ವರ್ಷಗಳ ಹಿಂದೆ ಬೃಹನ್‌ ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಉಪಮೇಯರ್‌ ಆಗಿ ಸೇವೆ ಸಲ್ಲಿಸಿದ್ದ ಶೈಲಜಾ ಗಿರRರ್‌ ಅವರು, ತನ್ನ ಕಾರ್ಯನಿಷ್ಠೆಯಿಂದ ತನ್ನ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರನ್ನು ಇತ್ತೀಚೆಗೆ ಅವರ ಕಚೇರಿಯಲ್ಲಿ ಭೇಟಿಯಾದ ಕಾಂದಿವಲಿ ಕನ್ನಡ ಸಂಘದ ಪದಾಧಿಕಾರಿಗಳು ಪುಷ್ಪಗುತ್ಛವನ್ನಿತ್ತು ಅಭಿಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೊಲ್ಯ ಜಯಪಾಲ ಶೆಟ್ಟಿ, ಪ್ರೇಮನಾಥ್‌ ಕೋಟ್ಯಾನ್‌, ಬಿಜೆಪಿಯ ಪ್ರಧಾನ ಪ್ರಚಾರ ಸಮಿತಿಯ ಮುಖಂಡ ಸಂಜಯ್‌ ಭಾವಿಶ್ಕರ್‌, ಇತರ ಕನ್ನಡಿಗ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next