Advertisement

ಪತ್ರಕರ್ತರಿಗೆ ಪ್ರಶಸ್ತಿ ಪ್ರಕಟ

11:39 PM Mar 03, 2020 | Lakshmi GovindaRaj |

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2018ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. “ಉದಯವಾಣಿ’ ಮಂಗಳೂರು ಆವೃತ್ತಿಯ ಸಹಾಯಕ ಸಂಪಾದಕ ಮನೋಹರ್‌ ಪ್ರಸಾದ್‌ ಅವರು ಡಿ.ವಿ.ಜಿ.ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿಗೆ “ಉದಯವಾಣಿ’ಯ ಉಪ ಮುಖ್ಯ ವರದಿಗಾರ ಎಸ್‌.ಲಕ್ಷ್ಮೀನಾರಾಯಣ (ಬೆಂಗಳೂರು), ಹಾಗೆಯೇ ವರದಿಗಾರ ಅರುಣ್‌ಕುಮಾರ್‌ (ಬೈಂದೂರು) ಅವರು ಅತ್ಯುತ್ತಮ ಗ್ರಾಮಾಂತರ ವರದಿಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾರ್ಚ್‌ 7 ಮತ್ತು 8 ರಂದು ಮಂಗಳೂರಿನ ಕುದ್ಲುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಟೀಲ್‌ ಪುಟ್ಟಪ್ಪ ಪ್ರಶಸ್ತಿಗೆ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್‌, ಡಾ.ಎಂ.ಎಂ.ಕಲಬುರಗಿ ಪ್ರಶಸ್ತಿಗೆ ಜಿ.ಎನ್‌.ಮೋಹನ್‌, ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಪದ್ಮರಾಜ ದಂಡಾವತಿ, ಕೆ.ಎನ್‌.ನೆಟ್ಟಕಲ್ಲಪ್ಪ ಪ್ರಶಸ್ತಿಗೆ ಮಂಗಳೂರಿನ ಕ್ರೀಡಾ ಅಂಕಣಕಾರ ಜಗದೀಶ್‌ ಚಂದ್ರ ಅಂಚನ್‌ ಭಾಜರಾಗಿದ್ದಾರೆ.

ರಾಜಶೇಖರ್‌ ಅಬ್ಬೂರು ಅವರಿಗೆ ಎಚ್‌.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ, ಸಿ. ರುದ್ರಪ್ಪ ಅವರಿಗೆ ಎಂ. ನಾಗೇಂದ್ರ ರಾವ್‌ ಪ್ರಶಸ್ತಿ, ಮುರಳೀಧರ ಖಜಾನೆ ಅವರಿಗೆ ಅತ್ಯುತ್ತಮ ಸಿನಿಮಾ ಪತ್ರಕರ್ತ ಪ್ರಶಸ್ತಿ ಸೇರಿದಂತೆ ಹಲವರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳು ದೊರೆತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next