Advertisement

ಆವಣಿ ಜಾತ್ರೆಗೆ ಜಾನುವಾರುಗಳ ದಂಡು

04:34 PM Mar 10, 2021 | Team Udayavani |

ಮುಳಬಾಗಿಲು: ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಗ್ರಾಮೀಣ ಸಂಸ್ಕೃತಿಯು ತನ್ನ ನೆಲೆ ಕಳೆದು ಕೊಳ್ಳುತ್ತಿದ್ದು, ಪ್ರಸ್ತುತ ಕೃಷಿಗೆ ಬೆನ್ನೆಲುಬಾದ ಜಾನು ವಾರು ಗಳ ಸಂಖ್ಯೆ ಕ್ಷೀಣಿಸುತ್ತಿರುವುದರ ನಡುವೆಯೂ ಆವಣಿ ಜಾನು ವಾರುಗಳ ಜಾತ್ರೆಯು ತನ್ನಮೆರುಗನ್ನೇ ಕಳೆದುಕೊಳ್ಳುತ್ತಿ ದ್ದರೂ ಹೆಚ್ಚಿನ ಜಾನುವಾರು ಗಳು ಆವಣಿ ಜಾತ್ರೆಯತ್ತ ಹರಿದು ಬರುತ್ತಿವೆ.

Advertisement

ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಶ್ರೀರಾಮಲಿಂಗೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ದ ಸ್ಥಳವಾಗಿದ್ದು, ರಾಮಾಯಣದ ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ, ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ ಎಂಬ ಐತಿಹ್ಯ ಇದೆ.

ಸಲ್ಲಾಪುರಮ್ಮ ದೇವರ ಮೆರವಣಿಗೆ: ಪ್ರತಿ ವರ್ಷಶಿವರಾತ್ರಿ ಹಬ್ಬದ ಮಾರನೆಯ ದಿವಸ ಅಂದರೆ ಈ ಬಾರಿ ಫೆ.13 ರಂದು ಸರ್ಕಾರದಿಂದ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ನಡೆಯಲಿದ್ದು, ರಥೋತ್ಸವದ ವೇಳೆ ಬ್ರಹ್ಮರಥದ ಮುಂಭಾಗದಲ್ಲಿಮಾತೆ ಕೀಲುಹೊಳಲಿ ಗ್ರಾಮದೇವತೆ ಸಲ್ಲಾಪುರಮ್ಮ ದೇವರ ಮೆರವಣಿಗೆ ಸಾಗುವುದರಿಂದ ರಥೋತ್ಸವಕ್ಕೆಮತ್ತಷ್ಟು ಮೆರಗು ಹೆಚ್ಚಾಗಿರುತ್ತದೆ. ಮತ್ತೂಂದೆಡೆ ಸದರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ 10-15 ದಿವಸಗಳ ಕಾಲ ಭಾರೀ ದನಗಳ ಜಾತ್ರೆಯು

ಸೇರಲಿದ್ದು, ಜಾತ್ರೆಯಲ್ಲಿ ಕರ್ನಾಟಕ, ಹಾವೇರಿ, ಗಂಗಾವತಿ, ಆಂಧ್ರ, ಬೆಜವಾಡಾ, ತಮಿಳುನಾಡು, ಒರಿಸ್ಸಾ ಹಾಗೂ ಗೋವಾ ರಾಜ್ಯಗಳಿಂದ ರಾಸುಗಳನ್ನು ಖರೀದಿಸಲು ವ್ಯಾಪಾರಿಗಳು ಆಗಮಿಸಿದ್ದಾರೆ.

ಶುಲ್ಕ ವಸೂಲಿ ಮಾಡದಿರಲು ನಿರ್ಧಾರ: ಶುಕ್ರವಾರ ಮತ್ತು ಶನಿವಾರ ಅಮಾವಾಸ್ಯೆ ಇರುವುದರಿಂದ ರೈತರು ಎತ್ತುಗಳನ್ನು ಮಾರಲು ಎತ್ತಿನಗಾಡಿಗಳಲ್ಲಿ ಹುಲ್ಲನ್ನುತುಂಬಿಕೊಂಡು ಈ ದಿನವೇ ಬಂದು ಈಗಾಗಲೇಬಿಡಾರ ಹೂಡಿದ್ದಾರೆ. ಆಗಲೇ ಬಂದಿರುವ ವ್ಯಾಪಾರಸ್ಥರು ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದ್ದು,ಒಂದು ಜೊತೆ ಎತ್ತಿನ ಬೆಲೆ ಕನಿಷ್ಠ 1 ಲಕ್ಷದಿಂದ 2.75ಲಕ್ಷ ವರೆಗೆ ಮಾರಾಟವಾಗುತ್ತಿದೆ. ಅಲ್ಲದೇ ಜಾತ್ರೆಯಲ್ಲಿಎತ್ತು/ಗಾಡಿಗಳ ಶುಲ್ಕವನ್ನು ವಸೂಲಿ ಮಾಡದಿರಲುನಿರ್ಧರಿಸಲಾಗಿರುತ್ತದೆ. ಪ್ರತಿ ವರ್ಷ ರಥೋತ್ಸಹಾಗೂ ಜಾತ್ರೆ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಿದ್ದು, ರಥೋತ್ಸವವು ವೈಭವದಿಂದನಡೆದರೂ ಜನರು ಗೋಹತ್ಯೆ ಮಾಡುತ್ತಿರುವುದರಿಂದ ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ.

Advertisement

ವಿವಿಧೆಡೆಯಿಂದ ಎತ್ತುಗಳು ಆಗಮನ: ಪ್ರಸ್ತುತ ಜನಗಳ ಜಾತ್ರೆಯಾಗಿ ಪರಿಣಮಿಸುತ್ತಿದ್ದು, ಅದರಲ್ಲೂಈ ಬಾರಿ ಕಾಲುಬಾಯಿ ಜ್ವರ ಕಡಿವಾಣಕ್ಕಾಗಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ತುಳಸಿರಾಮ್‌ ಮಾರ್ಗದರ್ಶನದಂತೆ ವೈದ್ಯರು ಹಲವಾರು ಕ್ರಮ ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ಹೊಸಕೋಟೆ ತಾಲೂಕು ಡಿ.ಶೆಟ್ಟಿಹಳ್ಳಿ, ಮಾಲೂರು ತಾಲೂಕು ಮಾಸ್ತಿ, ಕೋಲಾರ ತಾಲೂಕು ನರಸಾಪುರ,ತಂಬಿಹಳ್ಳಿ, ಆಂಧ್ರದ ವಿ.ಕೋಟೆ, ಬೈರಕೂರು, ಕುರುಡುಮಲೆ ಸೇರಿದಂತೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ನೂರಾರು ಜೊತೆಗಳ ಎತ್ತುಗಳು ಜಾತ್ರೆಗೆ ಆಗಮಿಸಿವೆ.

ನೀರು, ಮೇವಿನ ವ್ಯವಸ್ಥೆ ಕಲ್ಪಿಸಲಿ: ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ಸೌಕರ್ಯಒದಗಿಸಬೇಕೆಂದು ಮಾರಾಟ ಮಾಡಲು ಬಂದು ಬೀಡು ಬಿಟ್ಟಿರುವ ಮಾಸ್ತಿ ಕೃಷ್ಣಪ್ಪ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಒಂದು ವಾರ 60, ರಥೋತ್ಸವ ದಿನ 160 ರಿಂದ 170 ಬಸ್‌ :

ಫೆ.13 ರಂದು ನಡೆಯಲಿರುವ ಜಿಲ್ಲೆಯಲ್ಲಿಯೇ ಅತೀದೊಡ್ಡದಾದ 62 ಅಡಿಗಳ ಎತ್ತರದ ಶೃಂಗಾರ ಭರಿತಬ್ರಹ್ಮರಥೋತ್ಸವಕ್ಕೆ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ಅನುವು ಮಾಡಿಕೊಟ್ಟಿದೆ. ಜಾತ್ರೆಯಲ್ಲಿಯೇ ಘಟಕ ಸ್ಥಾಪಿಸಿ ಮುಳಬಾಗಿಲು,ಕೋಲಾರ, ಕೆ.ಜಿ.ಎಫ್, ಶ್ರೀನಿವಾಸಪುರ, ಮಾಲೂರುಡಿಪೋಗಳಿಂದ ಒಂದು ವಾರ ಕಾಲ ವಿಶೇಷವಾಗಿ ಪ್ರತಿನಿತ್ಯ ಎಲ್ಲಾ ಮಾರ್ಗಗಳಲ್ಲಿ 60 ಬಸ್‌ಗಳನ್ನು ಮತ್ತುರಥೋತ್ಸವದಂದು 160-170 ಬಸ್‌ಗಳನ್ನು ಆವಣಿಗೆಜಾತ್ರೆಗೆ ಹಾಕಿರುತ್ತಾರೆ. ಅಲ್ಲದೇ ಕೆ.ಎಸ್‌.ಆರ್‌ಟಿ.ಸಿಅಧಿಕಾರಿಗಳು ಜಾತ್ರೆಯಲ್ಲಿ ಹಾಜರಿದ್ದು, ಎಲ್ಲಾಮಾರ್ಗಗಳಲ್ಲಿ ಸಾಕಷ್ಟು ಬಸ್‌ಗಳನ್ನು ಓಡಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.

ಜಾನುವಾರುಗಳಿಗೆ ನೀರು ಕುಡಿಸಲು ರಾಮಾಪುರ ಕೆರೆಗೆ ಹೋಗುವ ಸ್ಥಿತಿ :

ಸದರೀ ಜಾತ್ರೆಯಲ್ಲಿ ನೀರಿನ ಸೌಕರ್ಯ ಕಲ್ಪಿಸಲು ಒಪ್ಪಿಕೊಂಡಿರುವ ಆವಣಿ ಗ್ರಾಪಂ ಪಿಡಿಒ ಇದುವರೆಗೂ ಜಾತ್ರೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಿಗೆನೀರು ತುಂಬಿಸದೇ ಇರುವುದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮನೆಗಳ ಆವರಣಗಳಲ್ಲಿರುವ ತೊಟ್ಟಿಗಳಿಂದಲೇ ಕಾಡಿ ಬೇಡಿ ತೆಗೆದುಕೊಂಡು ಹೋಗುವುದು ಕಂಡುಬಂತು. ಕೆಲವು ರೈತರು ಜಾನುವಾ ರುಗಳನ್ನು ದೂರದ ರಾಮಾಪುರ ಕೆರೆಗೆ ಹೊಡೆದುಕೊಂಡು ನೀರು ಕುಡಿಸಿಕೊಂಡು ಬರುತ್ತಿದ್ದ ಪರಿಸ್ಥಿತಿನಿರ್ಮಾಣವಾಗಿತ್ತು. ಪಿಡಿಒ, ಜಾನುವಾರುಗಳಜಾತ್ರೆಯಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕಾಗಿದ್ದರೂ ಇತ್ತ ಸುಳಿಯದೇ ಇರುವುದರಿಂದಜಾನುವಾರುಗಳನ್ನು ಮಾರಲು ಬಂದಿರುವ ರೈತರು ಕತ್ತಲಲ್ಲಿಯೇ ಇರುವಂತಾಗಿದೆ.

ಸುಳಿಯದ ಅಧಿಕಾರಿಗಳು :

ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ನೀರಿನ ಸೌಕರ್ಯಕಲ್ಪಿಸಲೆಂದು ಪೂರ್ವಬಾವಿ ಸಭೆಯಲ್ಲಿಒಪ್ಪಿಕೊಂಡಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಸುಳಿಯಲಿಲ್ಲವೆಂದು ಜನರು ಆರೋಪಿಸಿದರು.

ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳಿಗೆಪೂರ್ವಭಾವಿ ಸಭೆಯಲ್ಲಿ ಸೂಚಿಸಲಾಗಿರುತ್ತದೆ. ದಿನವೇ (ಮಂಗಳವಾರ) ನೀರು ಸರಬರಾಜುಮಾಡಬೇಕಾಗಿದ್ದರೂ ಮಾಡಿರಲಿಲ್ಲ. ಬುಧವಾರದಿಂದ ಕ್ರಮ ಕೈಗೊಳ್ಳಲಿದ್ದಾರೆ. ಸುಬ್ರಹ್ಮಣ್ಯಂ, ಆವಣಿ ರಾಜಸ್ವ ನಿರೀಕ್ಷಕ

 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next