Advertisement

Peruvayi : ಆಟೋರಿಕ್ಷಾ-ಬೈಕ್‌ ಢಿಕ್ಕಿ : ಮೂವರಿಗೆ ಗಾಯ

09:01 PM Aug 06, 2024 | Team Udayavani |

ವಿಟ್ಲ: ಪೆರುವಾಯಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋರಿಕ್ಷಾ-ಬೈಕ್‌ ಢಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ(ಆ.6) ನಡೆದಿದೆ.

Advertisement

ಅಪಘಾತದಲ್ಲಿ ಬೋಳಂತೂರು ಗ್ರಾಮದ ನಿವಾಸಿಗಳಾದ ರುಕಿಯಾ, ಆಸಿಯ ಮರಿಯಮ್ಮ, ಬಶೀರ್‌ ಗಾಯಗೊಂಡಿದ್ದು,ಗಾಯಾಳುಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರ್ಪಡೆಗೊಳಿಸಲಾಗಿದೆ.

ಬೋಳಂತೂರಿನಿಂದ ಪೆರುವಾಯಿಗೆ ಈ ಮೂವರನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಚಾಲಕ ನವಾಜ್‌ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭ ಪೆರುವಾಯಿಯಲ್ಲಿ ದ್ವಿಚಕ್ರ ವಾಹನ ಸವಾರ ಗಣೇಶ್‌ ಅವರು ರಿಕ್ಷಾಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸದ್ಯ ಈ ಕುರಿತಂತೆ ವಿಟ್ಲ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಟಿಪ್ಪರ್‌ ಢಿಕ್ಕಿ : ಸವಾರನಿಗೆ ಗಾಯ

ಪುಣಚ ಗ್ರಾಮದ ದೇವಸ್ಯ ಎಂಬಲ್ಲಿ ಬೈಕ್‌ಗೆ ಟಿಪ್ಪರ್‌ ಲಾರಿ ಢಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮಂಗಳವಾರ(ಆ.6) ನಡೆದಿದೆ. ಅಪಘಾತದಲ್ಲಿ ಸೀತಾರಾಮ ಕೆ.(21) ಅವರು ಗಾಯಗೊಂಡವರು.
ಪುಣಚ ಗ್ರಾಮದ ಕೊಲ್ಲಪದವು ಬೈರಿಕಟ್ಟೆ ಎಂಬಲ್ಲಿಂದ ಪುತ್ತೂರಿಗೆ ಹೊರಟ ಸೀತಾರಾಮ ಅವರ ಬೈಕ್‌ಗೆ ಪರಿಯಾಲ್ತಡ್ಕದಿಂದ ಬಂದ ಟಿಪ್ಪರ್‌ ಲಾರಿ ದೇವಸ್ಯದಲ್ಲಿ ಢಿಕ್ಕಿ ಹೊಡೆದಿದೆ. ಬೈಕ್‌ ಸವಾರ ಅವರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್‌ ಚಾಲಕನ ಅಜಾಗರೂಕತೆಯ ಚಾಲನೆಯೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ.‌ ಸದ್ಯ ಈ ಕುರಿತಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next