Advertisement

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

01:25 PM Mar 28, 2024 | Team Udayavani |

ಬೆಂಗಳೂರು: ಸಾಲ ವಾಪಸ್‌ ನೀಡಿಲ್ಲ ಎಂದು ಜಗನ್ನಾಥ್‌ ಎಂಬವರ ಆಟೋವನ್ನು ಅಕ್ರಮವಾಗಿ ಜಪ್ತಿ ಮಾಡಿದ ಇಬ್ಬರು ಆರೋಪಿಗಳನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸಲ್ಮಾನ್‌ ಮತ್ತು ಪಠಾಣ್‌ ಬಂಧಿತರು.

ಎಂ.ಜಿ.ರಸ್ತೆಯಲ್ಲಿರುವ ಫೈನಾನ್ಸ್‌ ಕಂಪನಿಯಲ್ಲಿ ಜಗನ್ನಾಥ್‌ 3 ತಿಂಗಳ ಹಿಂದೆ 2 ಲಕ್ಷ ರೂ. ಸಾಲ ಪಡೆದಿದ್ದರು. ರಂಗಸ್ವಾಮಿ ಎಂಬವರು ಜಾಮೀನು ನೀಡಿದ್ದರು. ಜಗನ್ನಾಥ್‌ ಮಾರ್ಚ್‌ ತಿಂಗಳ ಹಣ ಕಟ್ಟಿರಲಿಲ್ಲ. ಹೀಗಾಗಿ ರಂಗಸ್ವಾಮಿ ಆಟೋ ಜಪ್ತಿ ಮಾಡುವಂತೆ ಕರ್ನಾಟಕ ರಿಕವರಿ ಏಜೆನ್ಸಿ ಯಲ್ಲಿ ಕೆಲಸ ಮಾಡುವ ಆರೋಪಿಗಳಿಗೆ ಹೇಳಿದ್ದರು. ಅದರಿಂದ ಸೋಮವಾರ ತಡರಾತ್ರಿ ಬಿಟಿಎಂ ಲೇಔಟ್‌ ಕಡೆ ಹೋಗುವಾಗ ಆರೋಪಿಗಳು ಅಡ್ಡಗಟ್ಟಿ ಆಟೋ ಜಪ್ತಿಗೆ ಮುಂದಾಗಿದ್ದಾರೆ.

ಮನವಿ ಮಾಡಿದರೂ ಆಟೋ ಜಪ್ತಿ ಮಾಡಿದ್ದರು. ಜಗನ್ನಾಥ್‌ ಸಲ್ಮಾನ್‌ಗೆ ಕರೆ ಮಾಡಿ ಆಟೋ ಬಿಡುವಂತೆ ಕೇಳಿದ್ದರು. ಆಗ ಆರೋಪಿ, ಧರ್ಮವನ್ನು ಪ್ರಸ್ತಾಪಿಸಿ ನಿಂದಿಸಿ, ಆಟೋ ಬಿಡುವುದಿಲ್ಲ ಎಂದಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಗನ್ನಾಥ್‌ ದೂರು ನೀಡಿದ್ದರು. ಇಬ್ಬರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next