Advertisement

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

12:24 AM Jul 01, 2024 | Team Udayavani |

ಉಡುಪಿ: ರಿಕ್ಷಾ ಢಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ಗುಂಡಿಬೈಲಿನಲ್ಲಿ ಸಂಭವಿಸಿದೆ.

Advertisement

ಕಾರ್ಕಳದ ಜಯರಾಮ ಅವರು ತನ್ನ ಕಾರಿನಲ್ಲಿ ಕುಟುಂಬ ಸಹಿತ ಅಂಬಾಗಿಲಿನಿಂದ ಕಲ್ಸಂಕ ರಸ್ತೆಯಾಗಿ ಹೋಗುತ್ತಿದ್ದಾಗ ಗುಂಡಿಬೈಲು ಬಳಿ ಹಿಂದಿನಿಂದ ಅತಿವೇಗದಲ್ಲಿ ಬಂದ ರಿಕ್ಷಾ ಢಿಕ್ಕಿ ಹೊಡೆದಿದೆ.

ರಿಕ್ಷಾ ಚಾಲಕ ಗಣೇಶ್‌ ವಿರುದ್ಧ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ: ಓರ್ವ ವಶಕ್ಕೆ
ಉಡುಪಿ: ನಗರದ ಖಾಸಗಿ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 76 ಬಡಗ ಬೆಟ್ಟುವಿನ ಇಮಿ¤ಯಾಜ್‌(42)ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಆತ ಗಾಂಜಾ ಸೇವಿ ಸಿರುವುದನ್ನು ಫಾರೆನ್ಸಿಕ್‌ ವರದಿ ದೃಢಪಡಿಸಿದೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: 6 ಮಂದಿ ವಶಕ್ಕೆ
ಹಿರಿಯಡಕ: ಅಂಜಾರು ಗ್ರಾಮದ ಉದ್ದುಬೆಟ್ಟು ಬಸ್‌ ನಿಲ್ದಾಣದ ಬಳಿ ಜೂಜಾಟ ವಾಡುತ್ತಿದ್ದ ಸಂತೋಷ, ರಮೇಶ, ರಾಘವೇಂದ್ರ, ಸತೀಶ, ಪ್ರತಾಪ್‌ ಹಾಗೂ ಸುರೇಶ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಂದ 11,210 ರೂ. ಮತ್ತು ಆಟಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next