Advertisement

ರಸ್ತೆಯಲ್ಲಿ ಸಿಕ್ಕಿದ ಬ್ಯಾಗನ್ನು ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾಚಾಲಕ

04:10 PM Feb 23, 2021 | Team Udayavani |

ಕಟಪಾಡಿ: ರಿಕ್ಷಾ ಚಾಲಕನೋರ್ವ ತನಗೆ ಸಿಕ್ಕಿದ ನಗದು, ಮೊಬೈಲ್ ಸಹಿತ ಇತರೇ ಅಮೂಲ್ಯ ವಸ್ತುಗಳನ್ನು ಹೊಂದಿದ್ದ ಬ್ಯಾಗ್‍ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆಯ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.

Advertisement

ಪಲಿಮಾರು ಮೂಲದ ರಾಘವೇಂದ್ರ ರಾವ್ ಎಂಬವರು ಪತ್ನಿ ಸಹಿತರಾಗಿ ಉಡುಪಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಸ್ಕೂಟಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಲೇಡಿಸ್ ಬ್ಯಾಗ್‍ನ್ನು ಕಳೆದುಕೊಂಡಿದ್ದರು. ಬ್ಯಾಗ್‍ನಲ್ಲಿ ಸುಮಾರು 25 ಸಾವಿರ ರೂ.ಗೂ ಅಧಿಕ ನಗದು, 3 ಪರ್ಸ್, 2 ಮೊಬೈಲ್, 2 ಎಟಿಎಂ ಕಾರ್ಡ್ ಸಹಿತ ಇತರೇ ಮೌಲ್ಯಯುತ ವಸ್ತುಗಳಿದ್ದವು.

ಇದನ್ನೂ ಓದಿ:ದೈನಂದಿನ ವೆಚ್ಚ ಭರಿಸಲು ಪರದಾಟ! ­ಎಪಿಎಂಸಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣ

ಕಟಪಾಡಿಯ ರಿಕ್ಷಾ ಚಾಲಕ ಕುಶ ಶ್ರೀಯಾನ್ ಅವರಿಗೆ ಈ ಬ್ಯಾಗ್ ಸಿಕ್ಕದ್ದು,  ಸಹೋದ್ಯೋಗಿ ಭಾಸ್ಕರ ಪೂಜಾರಿ ಎಂಬವರ ಮುಖಾಂತರ ಕಟಪಾಡಿ ಪೊಲೀಸ್ ಹೊರಠಾಣೆಗೆ ತಲುಪಿಸಿದ್ದರು.

ಬ್ಯಾಗ್ ಕಳೆದುಕೊಂಡವರು ಮತ್ತೆ ಹುಡುಕಾಡುತ್ತಿರುವಾಗ ಮಾಹಿತಿ ಅರಿತು ಠಾಣೆಗೆ ಬಂದು ವಿವರಗಳನ್ನು ತಿಳಿಸಿ ಬ್ಯಾಗ್ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next