Advertisement

ಪಡುಬಿದ್ರಿ : ಸಾಲಬಾಧೆಯಿಂದ ಮನನೊಂದ ರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ

06:32 PM Oct 29, 2020 | sudhir |

ಪಡುಬಿದ್ರಿ : ಸಾಲಬಾಧೆಯಿಂದ ಮನನೊಂದು ಪಡುಬಿದ್ರಿಯ ಮುರುಡಿ ಬ್ರಹ್ಮಸ್ಥಾನ ಬಳಿಯ ಬಾಡಿಗೆ ಮನೆ ನಿವಾಸಿ, ಆಟೋರಿಕ್ಷಾ ಚಾಲಕ ಎಂ. ಸತೀಶ್‌ ಪೂಜಾರಿ (58) ಅವರು ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ದಶಕಗಳ ಹಿಂದೆ ಬಸ್‌ ಚಾಲಕರಾಗಿದ್ದ ಅವರು ಅನಂತರ ಪಡುಬಿದ್ರಿಯಲ್ಲಿ ಆಟೋರಿಕ್ಷಾ ಚಾಲಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಜೀವನ ನಿರ್ವಹಣೆಗಾಗಿ ಸ್ವಂತ ಆಟೋ ರಿಕ್ಷಾ ಹೊಂದಲು ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಈ ಹಿಂದೆ ವಿವಿಧೆಡೆ ಸಾಲ ಪಡೆದುಕೊಂಡಿದ್ದರು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಮರ್ಪಕ ದುಡಿಮೆ ಇಲ್ಲದೆ ಸಾಲ ಮರುಪಾವತಿಸಲು ಸಮಸ್ಯೆ ಉಂಟಾಗಿತ್ತು. ಇದರಿಂದ ಮನನೊಂದು ಪಡುಬಿದ್ರಿಯ ಪೆಟ್ರೋಲ್‌ ಬಂಕ್‌ವೊಂದರ ಬಳಿ ಅ. 27ರಂದು ಅವರು ವಿಷ ಪದಾರ್ಥವನ್ನು ಸೇವಿಸಿದ್ದರು. ಬಳಿಕ ಈ ಬಗ್ಗೆ ಮತ್ತೋರ್ವ ಆಟೋ ಚಾಲಕನಿಗೆ ಮಾಹಿತಿಯನ್ನು ನೀಡಿದ್ದರು. ತತ್‌ಕ್ಷಣ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು.

ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅ. 29ರಂದು ಮೃತಪಟ್ಟಿದ್ದಾರೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next