Advertisement
ವಸತಿ ನಿಲಯದ ವಾರ್ಡನ್ ಕಚೇರಿಯಲ್ಲಿ ನಿತ್ಯ ತಡರಾತ್ರಿಯಲ್ಲಿ ಪಾರ್ಟಿ ಹಾಗೂ ಮೋಜು ಮಸ್ತಿ ನಡೆಯುತ್ತಿದೆ. ಇದರಿಂದ ನಮಗೆ ಹಲವು ತೊಂದರೆಯಾಗುತ್ತಿವೆ. ಹೆಣ್ಣು ಮಕ್ಕಳ ವಸತಿನಿಲಯಕ್ಕೆ ಯುವಕರು ಬರಬಾರದೆಂದು ನಿಯಮ ಇದ್ದರೂ ದಿನ ರಾತ್ರಿಯಲ್ಲಿ ಯಾವಾಗಲೂ ಇಲ್ಲಿಗೆ ಯುವಕರರು ಬರುತ್ತಿದ್ದಾರೆ. ದಯವಿಟ್ಟು ಪತ್ರ ತಲುಪಿದ ತಕ್ಷಣ ನಮ್ಮ ರಕ್ಷಣೆ ಧಾವಿಸಬೇಕು ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಅವರು ಭೇಟಿ ನೀಡಿ ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಆಲಿಸಿ, ವಿದ್ಯಾರ್ಥಿನಿಯರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿ ಧೈರ್ಯ ತುಂಬಿದರು.
Related Articles
Advertisement
ಸ್ಥಳಕ್ಕೆ ಬಂದ ಜಿಪಂ ಸಿಇಒ: ವಸತಿ ನಿಲಯ ಸ್ಥಿತಿಗತಿಯ ಬಗ್ಗೆ ಜಿಪಂ ಅಧ್ಯಕ್ಷರು ಸಿಇಒ ಮಹಾಂತೇ ಬೀಳಗಿ ಅವರಿಗೆ ತಿಳಿಸಿದ ಕೂಡಲೆ ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯರಿಂದ ಸಮಸ್ಯೆ ಆಲಿಸಿ, ಸಿಬ್ಬಂದಿಗಳೊಂದಿಗೂ ಮಾತನಾಡಿದರು. ಬಳಿಕ ವಾರ್ಡನ್ರನ್ನು ಕೂಡಲೆ ಬೇರೆ ಕಡೆಗೆ ಕಳುಹಿಸಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ನಿಮ್ಮೊಂದಿಗೆ ಜಿಲ್ಲಾಡಳಿತವಿದೆ. ಇಂಥ ಸಮಸ್ಯೆಗಳನ್ನು ಇನ್ನು ಮುಂದೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಉತ್ತಮ ಶಿಕ್ಷಣ ಪಡೆದುಕೊಂಡು ಸರ್ಕಾರಕ್ಕೆ ಮತ್ತು ವಸತಿ ನಿಲಯಕ್ಕೂ ಗೌರವ ತಂದುವಕೊಡುವಂತೆ ಜಿಪಂ ಸಿಇಒ ಮಹಾಂತೇಶ ಭರವಸೆ ನೀಡಿದರು. ಅಲ್ಪಸಂಖ್ಯಾತರ ತಾಲೂಕು ಅಧಿಕಾರಿ ಹಾಗೂ ವಸತಿ ನಿಲಯ ವಾರ್ಡನ್ ಮೀನಾಕ್ಷಿ ಎಂಬುವವರೇ ಆಗಿದ್ದಾರೆ. ಹೀಗಾಗಿ ಸಮಸ್ಯೆಗೆ ಜಾಸ್ತಿಯಾಗುತ್ತಿದೆ. ಹಲವು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ ಎಂದು ಇಲಾಖೆಯಲ್ಲಿ ನಡೆದ ಪ್ರತಿಯೊಂದು ಕೆಲಸಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ವಾರ್ಡನ್ರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಜಿಪಂ ಅಧ್ಯಕ್ಷರು ಸಿಇಒಗೆ ತಿಳಿಸಿದರು.
ಎಬಿವಿಪಿ ಮುಖಂಡರ ವಿರುದ್ಧ ಗರಂ: ವಸತಿ ನಿಲಯಕ್ಕೆ ಜಿಪಂ ಸಿಇಒ ಹಾಗೂ ಜಿಪಂ ಅಧ್ಯಕ್ಷರು ಬಂದ ಬಳಿಕ, ಎಬಿವಿಪಿ ಪ್ರಮುಖ ಅಂಬಾದಾಶ ನೆಳಗೆ ಅಲ್ಪಸಂಖ್ಯಾತರ ನಿಲಯಕ್ಕೆ ಬಂದು, ಇಲ್ಲಿ ಸಮಸ್ಯೆಯಿದೆ ಬಗೆ ಹರಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಆಗ ಜಿಪಂ ಅಧ್ಯಕ್ಷರು, ಅವರ ಕಷ್ಟಕ್ಕೆ ಬಾರದಿರುವ ಸಂಘಟನೆಯ ಮುಖಂಡರನ್ನು ನಾನು ಗುರುತಿಸಲ್ಲ ಎಂದು ಎಬಿವಿಪಿ ಪ್ರಮುಖರ ವಿರುದ್ಧ ಗರಂ ಆದರು.
ವಾರ್ಡನ್ ಗೈರು: ವಸತಿ ನಿಲಯದ ವಾರ್ಡನ್ ಆಗಿರುವ ಮೀನಾಕ್ಷಿ ಅವರು, ಜಿಪಂ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಮತ್ತು ಔರಾದ ಸಿಪಿಐ ರಮೇಶ ಕುಮಾರ ಮೈಲುರಕರ್ ಬಂದಾಗ ಹಾಜರಿರಲಿಲ್ಲ.