Advertisement

ಆಡಿಯೋ ಟೇಪ್‌ ಪ್ರಕರಣ: ಸಿಎಂಗೆ ರಿಲೀಫ್‌

09:49 AM Oct 27, 2019 | Team Udayavani |

ಕಲಬುರಗಿ: ಆಪರೇಷನ್‌ ಕಮಲದ ಸಂಬಂಧ ಆಡಿಯೋ ಟೇಪ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತೆ ರಿಲೀಫ್‌ ಸಿಕ್ಕಿದೆ. ಗುರುಮಿಠಕಲ್‌ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಪಾಟೀಲರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಗುಲಬರ್ಗಾ ಪೀಠವು ವಿಚಾರಣೆ ನಡೆಸಿ, ನ.7ಕ್ಕೆ ಮುಂದೂಡಿತು.

Advertisement

ಶಾಸಕ ಕಂದಕೂರ ಅವರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಅವರು ಶರಣಗೌಡ ಅವರಿಗೆ 10 ಕೋ. ರೂ. ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಿಡಿಯನ್ನು ಆಗಿನ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿ, ತನಿಖೆ ಶುರುವಾಗಿತ್ತು. ಆಗ ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದರು.

ಅರ್ಜಿದಾರರು ಮತ್ತು ಯಡಿಯೂರಪ್ಪ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ನ.7ಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next