Advertisement

ನ್ಯಾಯವಾದಿಗಳಿಗೆ ಎಲ್ಲ ವಿಷಯಗಳ ಪರಿಣತಿ ಅಗತ್ಯ

12:44 PM Dec 09, 2018 | Team Udayavani |

ಮಾನ್ವಿ: ವಕೀಲರಿಗೆ ಕೇವಲ ತಮ್ಮ ವೃತ್ತಿ ಪುಸ್ತಕದ ಹೊರತಾಗಿಯು ಕೃಷಿ, ವೈದ್ಯಕೀಯ, ಸೇರಿ ಎಲ್ಲ ವಿಷಯಗಳ ಪರಿಣತಿ ಹೊಂದಿದ್ದರೆ ಮಾತ್ರ ಉತ್ತಮ ವಕೀಲರಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ
ಬಿ.ಎ.ಪಾಟೀಲ ಹೇಳಿದರು.

Advertisement

ರಾಯಚೂರು ಜಿಲ್ಲಾ ನ್ಯಾಯಾಂಗ ಇಲಾಖೆ, ವಕೀಲರ ಸಂಘ ಮಾನ್ವಿ ಹಾಗೂ ಲೋಕೋಪಯೋಗಿ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಪಟ್ಟಣದ ಸಿವಿಲ್‌ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ನೂತನ ಸಿವಿಲ್‌ ನ್ಯಾಯಾಲಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಕೀಲರು ಕೇವಲ ಒಂದು ವಿಷಯದಲ್ಲಿ ಪರಿಣತಿ ಸಾಧಿಸಿದರೆ ಸಾಲದು, ಆತನಿಗೆ ಎಲ್ಲ ಕ್ಷೇತ್ರಗಳ ಜ್ಞಾನ ಇರಬೇಕು ಅಂದಾಗ ಮಾತ್ರ ತನ್ನ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು. ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ಸಾಗಬೇಕು. ಅವಕಾಶ ಬಂದಾಗ ಮುನ್ನುಗ್ಗಬೇಕು. ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ, ವಕೀಲರ ವೃತ್ತಿ ತುಂಬಾ ಗೌರವಯುತವಾದದ್ದು, ವೃತ್ತಿಗೆ ಧಕ್ಕೆ ಬರದಂತೆ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಸಿವಿಲ್‌ ನ್ಯಾಯಾಲಯದಲ್ಲಿ ಹಲವು ವರ್ಷಗಳ ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಬಾಕಿ ಇರುವ ಪ್ರಕರಣಗಳನ್ನು ಅದಷ್ಟು ಬೇಗ ಇತ್ಯರ್ಥಗೊಳಿಸಬೇಕು. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಮಾತನಾಡಿ, ಇಲ್ಲಿನ ಸಿವಿಲ್‌ ಕೋರ್ಟ್‌ಗೆ 70 ವರ್ಷಗಳ ಇತಿಹಾಸವಿದೆ. ಸಿವಿಲ್‌ ನ್ಯಾಯಾಲಯ ಹೊಸ ಕಟ್ಟಡ ಕಾಮಗಾರಿ ಕಳೆದ ವರ್ಷವೇ ಪ್ರಾರಂಭಗೊಳ್ಳಬೇಕಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಇಂದು ಶಂಕುಸ್ಥಾಪನೆ ನೆರವೇರಿರುವುದು ಖುಷಿಯ ವಿಚಾರ ಎಂದರು. 

Advertisement

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಬೈಲೂರು ಶಂಕರರಾಮ ಮಾತನಾಡಿದರು. ರಾಯಚೂರು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪ್ರ.ಕಾರ್ಯದರ್ಶಿ ಸೈಯ್ಯದ್‌ ತಾಹೇರ್‌ ಹುಸೇನಿ ಮತವಾಲೆ ಇದ್ದರು.

ಶಾಸಕಾಂಗ, ಕಾರ್ಯಾಂಗಕ್ಕಿಂತ ನ್ಯಾಯಾಂಗದ ಪಾತ್ರ ಅಗಾಧ. ಅದನ್ನು ಜವಾಬ್ದಾರಿಯಿಂದ ನಿಬಾಯಿಸಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಪಡಬೇಕು. ಎಲ್ಲವನ್ನೂ ಓದಬೇಕು. ಹೊಸ, ಹೊಸ ಅಲೋಚನೆಗಳ ಮೂಲಕ ಕಕ್ಷಿದಾರರಿಗೆ ನ್ಯಾ ದೊರಕಿಸಿಕೊಡಬೇಕು.
  ನ್ಯಾ| ಎ.ಬಿ. ಪಾಟೀಲ, ರಾಜ್ಯ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next