Advertisement

Badiyadka ಮನೆಯಿಂದ ಕಳವು ಯತ್ನ: ಪ್ರಕರಣ ದಾಖಲು

11:19 PM Oct 04, 2023 | Team Udayavani |

ಬದಿಯಡ್ಕ: ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ರೆಹಮಾನ್‌ ಅವರ ಮನೆಯಿಂದ ಅ. 3ರಂದು ಮಧ್ಯ ರಾತ್ರಿ ಕಳವು ಯತ್ನ ನಡೆದಿದೆ.

Advertisement

ಕಪಾಟಿನಿಂದ ಬಟ್ಟೆಗಳನ್ನು ಎಳೆದು ಎಸೆಯಲಾಗಿದೆ. ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು ಇರದ
ಕಾರಣ ಕಳ್ಳನಿಗೆ ಏನೂ ಲಭಿಸಿಲ್ಲ.ಕಳ್ಳರು ಮುಂಭಾಗದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು.

ಅಧ್ಯಾಪಕ ಮತ್ತು ಅವರ ಕುಟುಂಬದ ತರವಾಡು ಮನೆ ಇದಾಗಿದ್ದು ವಾರಕ್ಕೊಮ್ಮೆ ಮಾತ್ರ ಇಲ್ಲಿಗೆ ಬರುತ್ತಾರೆ. ಇದೇ ಮನೆ ಯಿಂದ ಈ ಹಿಂದೆ ಕಳವು ಯತ್ನ ನಡೆದಿದ್ದುದರಿಂದ ಸಿಸಿ ಕೆಮರಾ ಅಳವಡಿಸಲಾಗಿತ್ತು. ಅದರ ಹಾರ್ಡ್‌
ಡಿಸ್ಕ್ ಅನ್ನು ರಹಸ್ಯ ಸ್ಥಳದಲ್ಲಿರಿಸಲಾ ಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next