Advertisement

Kundapur: ಅಂಬರ್‌ಗ್ರೀಸ್‌ ಹೆಸರಿನಲ್ಲಿ ವಂಚನೆಗೆ ಯತ್ನ

12:59 AM Nov 10, 2023 | Team Udayavani |

ಕುಂದಾಪುರ: ಲಕ್ಷಾಂತರ ರೂ. ಬೆಲೆಬಾಳುವ ಅಂಬರ್‌ಗ್ರೀಸ್‌ (ತಿಮಿಂಗಿಲ ವಾಂತಿ) ಇದೆ ಎಂದು ಮೋಸ ಮಾಡಲು ಯತ್ನಿಸಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ಬೈಂದೂರಿನ ಪ್ರದೀಪ (28) ಅವರಿಗೆ ಒಂದು ವಾರದಿಂದ ಹೊನ್ನಾವರದ ಕಡತೋಕ ನಿವಾಸಿ ತಿರುಮಲ ದೇವಪ್ಪ ನಾಯ್ಕ ಪರಿಚಯವಾಗಿತ್ತು. ತಿರುಮಲ ದೇವಪ್ಪ ನಾಯ್ಕ 2 ದಿನಗಳ ಹಿಂದೆ ಕರೆ ಮಾಡಿ ಬೆಲೆ ಬಾಳುವ ಅಂಬರ್‌ ಗ್ರೀಸ್‌ (ತಿಮಿಂಗಿಲದ ವಾಂತಿ) ಇದೆ. ಅದನ್ನು ಮಾರಾಟ ಮಾಡಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಆಮಿಷ ತೋರಿಸಿದಾಗ ಪ್ರದೀಪ ಅದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದರು.

ಸೊತ್ತನ್ನು ಕಡಿಮೆ ಬೆಲೆಗೆ ನೀಡುವುದಾಗಿಯೂ, ಮಾರ್ಕೆಟಿನಲ್ಲಿ ಲಕ್ಷಾಂತರ ರೂ. ಮೊತ್ತ ಇದೆ ಎಂದು ಹೇಳಿ ಕುಂದಾಪುರದ ಸಂಗಂ ಜಂಕ್ಷನ್‌ ಬಳಿ ಬರುವಂತೆ ತಿಳಿಸಿದ್ದು, ಕಾರಿನಲ್ಲಿ ಬಂದ ತಿರುಮಲ ದೇವಪ್ಪ ನಾಯ್ಕ ಪ್ಲಾಸ್ಟಿಕ್‌ ಚೀಲದಲ್ಲಿ ಇರಿಸಿದ್ದ ಕಂದು ಬಿಳಿ ಮಿಶ್ರಿತ ಮೆತ್ತನೆ ಇದ್ದ ಸೊತ್ತನ್ನು ತೋರಿಸಿ ಇದು ಅಂಬರ್‌ ಗ್ರೀಸ್‌ (ತಿಮಿಂಗಿಲದ ವಾಂತಿ) ಎಂದು ಹೇಳಿ ಕಡಿಮೆ ಹಣಕ್ಕೆ ನೀಡುವುದಾಗಿ ತಿಳಿಸಿದ್ದ. ತಿರುಮಲ ದೇವಪ್ಪ ನಾಯ್ಕ ಮೋಸ ಮಾಡಿ ಹಣ ಪಡೆಯುವ ಉದ್ದೇಶ ಹೊಂದಿದ್ದಾಗಿ ಅನುಮಾನ ಬಂದಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next