Advertisement

ಶಾಸಕರ ಮನೆ ಆವರಣದಲ್ಲಿ ಶ್ರೀಗಂಧ ಮರಕ್ಕೆ ಕೊಡಲಿ: ಕಳ್ಳತನ ಯತ್ನ ವಿಫಲ

11:06 AM Nov 14, 2020 | keerthan |

ವಿಜಯಪುರ: ನಗರದಲ್ಲಿ ಶಾಸಕರೊಬ್ಬರ ಮನೆಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಡಿದು, ಕಳ್ಳತನಕ್ಕೆ ನಡೆಸಿದ ಯತ್ನ ವಿಫಲವಾದ ಘಟನೆ ನಡೆದಿದೆ.

Advertisement

ಶನಿವಾರ ನಸುಕಿನಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ‌ ಮನೆಯ ಆವರಣದಲ್ಲಿ ಬೆಳೆದಿರುವ ಶ್ರೀಗಂಧದ ಮರವನ್ನು ಗರಗಸದಿಂದ ಕತ್ತರಿಸಿದ್ದಾರೆ. ಗರಗಸದ ಸದ್ದು ಕೇಳಿ ಮನೆಯಲ್ಲಿದ್ದವರನ್ನು ಎಚ್ಚರಿಸಿದೆ.

ಆದರೆ ಅಷ್ಟರಲ್ಲಾಗಲೇ ಬುಡದಿಂದಲೇ ಕತ್ತರಿಸಿದ್ದ ಶ್ರೀಗಂಧದ ಮರ‌ ಮುರಿದು ಕಾಂಪೌಂಡ್ ಗೋಡೆ ಮೇಲೆ ಬಿದ್ದಿದೆ. ಇದರಿಂದ ಶ್ರೀಗಂಧ ಮರಗಳ್ಳತನಕ್ಕೆ ಮುಂದಾದುದನ್ನು ಕಂಡ ಮನೆಯಲ್ಲಿದ್ದವರು ಹೊರ ಬಂದಿದ್ದಾರೆ.‌ ಮನೆಯ ಬಾಗಿಲು ತೆಗೆಯುವ ಸದ್ದು ಕೇಳುತ್ತಲೇ ಕಳ್ಳರು ಶ್ರೀಗಂಧದ‌ ಕತ್ತರಿಸಿದ ಮರವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ:ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ಈ ಕುರಿತು ಶಾಸಕ ದೇವಾನಂದ ಅವರು ಆದರ್ಶ ನಗರ ಠಾಣಾ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next