Advertisement

ಪೆಟ್ರೋಲ್ ನೀಡಲಿಲ್ಲವೆಂದು ಸಿಬ್ಬಂದಿಯನ್ನೇ ಬೆಂಕಿಯಿಟ್ಟು ಸುಡಲೆತ್ನಿಸಿದ ಆರೋಪಿ ಬಂಧನ

10:35 AM Jan 05, 2020 | keerthan |

ಮೊರಾದಾಬಾದ್ ( ಉತ್ತರ ಪ್ರದೇಶ) : ಪೆಟ್ರೋಲ್ ಪಂಪ್ ಸಿಂಬ್ಬಂದಿ ಪೆಟ್ರೋಲ್ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಸಿಬ್ಬಂದಿಯನ್ನೇ ಬೆಂಕಿ ಹಚ್ಚಿ ಸುಡಲೆತ್ನಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.

Advertisement

ಶುಕ್ರವಾರ ಮೊರಾದಾಬಾದ್ ಸಿವಿಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಪಂಪ್ ಗೆ ಬಂದು ಸಿಬ್ಬಂದಿ ಬಳಿ ಬಾಟಲ್ ನಲ್ಲಿ ಪೆಟ್ರೋಲ್ ನೀಡುವಂತೆ ಕೇಳಿದ್ದ. ಆದರೆ ಸಿಬ್ಬಂದಿ ಬಾಟಲಿಯಲ್ಲಿ ಪೆಟ್ರೋಲ್  ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆತ ಮತ್ತೊಂದು ಪೆಟ್ರೋಲ್ ಪಂಪ್ ನಿಂದ ಪೆಟ್ರೋಲ್ ತಂದು ಆ ಸಿಬ್ಬಂದಿಯ ಮೇಲೆ ಸುರಿದು ಬೆಂಕಿ ಹಚ್ಚಿ ಕೊಲೆಗೈಯಲು ಯತ್ನಿಸಿದ್ದನು ಎಂದು ವರದಿಯಾಗಿದೆ.

ಕೊಲೆಯತ್ನ ಆರೋಪದಡಿ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next