Advertisement

ಇರಿದು ಯುವಕನ ಕೊಲೆಯತ್ನ: ಆರೋಪಿ ಪರಾರಿ

11:09 AM Jul 27, 2019 | keerthan |

ಮಂಗಳೂರು: ನಗರದ ಮಾಲೆಮಾರ್‌ ನೆಕ್ಕಿಲಗುಡ್ಡೆ ಎಂಬಲ್ಲಿ ಯುವಕ ನೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ 9.30ರ ಸುಮಾರಿಗೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

Advertisement

ಕೋಡಿಕಲ್‌ ನಿವಾಸಿ ಧೀರಜ್‌ (25) ಆರೋಪಿ. ಇರಿತದಿಂದ ಗಾಯಗೊಂಡಿರುವ ಮಂಗಳಾದೇವಿಯ ರತನ್‌ ರಾಜ್‌ (28) ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ
ಮಂಗಳಾದೇವಿ ನಿವಾಸಿಗಳಾದ ರತನ್‌ ರಾಜ್‌ ಮತ್ತು ಪುನೀತ್‌ ಗೆಳೆಯರು. ರತನ್‌ ರಾಜ್‌ಗೆ ಧೀರಜ್‌ ಎಂಬಾತನ ಮೇಲೆ ಹಳೆ ವೈಷಮ್ಯವಿದ್ದು, ಈ ಬಗ್ಗೆ ಗೆಳೆಯ ಪುನೀತ್‌ನಲ್ಲಿ ಹೇಳಿಕೊಂಡಿದ್ದ. ಇದಕ್ಕೆ ಪುನೀತ್‌ “ನಿಮ್ಮಿಬ್ಬರನ್ನು ನಾವು ರಾಜಿ ಸಂಧಾನ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದ.

ಬೈಕಿನಲ್ಲಿ ಅಡಗಿಸಿಟ್ಟಿದ್ದ
ಅದರಂತೆ, ಗುರುವಾರ ರಾತ್ರಿ ರತನ್‌ ರಾಜ್‌ ಮತ್ತು ಧೀರಜ್‌ನನ್ನು ಪುನೀತ್‌ ಮಾಲೆಮಾರ್‌ಯ ನೆಕ್ಕಿಲಗುಡ್ಡೆ ಬಳಿ ಬರಲು ಹೇಳಿದ್ದ. ಈ ಸಂದರ್ಭ ರತನ್‌ ರಾಜ್‌ ಮತ್ತು ಧೀರಜ್‌ ಮಧ್ಯೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ಹೋಗಿ ಧೀರಜ್‌ ತನ್ನ ಬೈಕಿನಲ್ಲಿ ಅಡಗಿಸಿಟ್ಟಿದ್ದ ಚೂರಿಯಿಂದ ರತನ್‌ಗೆ ಮರಣಾಂತಿಕ ಹಲ್ಲೆ ಮಾಡಿ ಬಳಿಕ ಪರಾರಿಯಾದ ಎಂದು ಪೊಲೀಸರು ತಿಳಿಸಿರೆ. ಸಂಧಾನಕ್ಕೆ ಕರೆದಿದ್ದ ಪುನೀತ್‌ಗೆ ಈ ಘಟನೆ ಆಘಾತ ಉಂಟು ಮಾಡಿದೆ. ಧೀರಜ್‌ ಚೂರಿ ತಂದಿರುವುದು ಪುನೀತ್‌ಗೆ ಗೊತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಗಾಯಾಳು ರತನ್‌ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾವೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿ¨ದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next