Advertisement

30 ಜನರಿಂದ ದಾಳಿ ; ಓರ್ವ ಸಾವು, ಐವರು ಗಂಭೀರ 

11:07 AM Nov 12, 2017 | Team Udayavani |

 ಶಿರಹಟ್ಟಿ: ಇಲ್ಲಿನ ಬೆಳಗಟ್ಟಿ ಗ್ರಾಮದಲ್ಲಿ ಶನಿವಾರರಾತ್ರಿ  ಮನೆಯಲ್ಲಿ ಮಲಗಿದ್ದಕುಟುಂಬದ ಮೇಲೆ  ಗುಂಪು ದಾಳಿ ನಡೆಸಿ  ಓರ್ವನನ್ನುಭೀಕರವಾಗಿ ಕೊಚ್ಚಿ ಕೊಲೆಗೈಯಲಾಗಿದ್ದು, ದಾಳಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

ಕೌಟುಂಬಿಕ ಕಲಹಕ್ಕಾಗಿ ದಾಳಿ ನಡೆದಿದ್ದು ಸುಭಾಷ್‌ ಬಂಡಿ ಎಂಬಾತ ತನ್ನ ಪತ್ನಿಯೊಂದಿಗಿನ ಕಲಹದಿಂದಾಗಿ ಆಕೆಯ ಸಹೋದರ ಸಣ್ಣಪ್ಪ ಹೊನ್ನಣ್ಣನವರ್‌ (32) ಮೇಲೆ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

30 ಕ್ಕೂ ಹೆಚ್ಚು ಜನರೊಂದಿಗೆ ಬಂದು ಮಲಗಿದ್ದವರ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ಸಣ್ಣಪ್ಪ ಸಂಬಂಧಿಕರಾದ ಅಡಿವಪ್ಪ ,ಚಂದ್ರಕಾಂತ, ರಂಗವ್ವ ,ಹನುಮವ್ವ,ವೆಂಕಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಶಿರಹಟ್ಟಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next