Advertisement

ಮಂಗಳೂರು: ಪೊಲೀಸರ ಮೇಲೆ ದಾಳಿ ನಡೆಸಿ ಬಂದೂಕು ಮುರಿದ ನಾಲ್ವರು ಯುವಕರು

12:37 PM Dec 19, 2020 | keerthan |

ಮಂಗಳೂರು: ಬೈಕ್ ನಲ್ಲಿ ಆಗಮಿಸಿದ ನಾಲ್ವರು ಯುವಕರು ಪೊಲೀಸರ ಮೇಲೆ ದಾಳಿ ನಡೆಸಿ, ಪೊಲೀಸರ ಬಂದೂಕು ಮುರಿದು ಹಾಕಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

Advertisement

ನಗರದ ನೀರುಮಾರ್ಗದ ಕಾಲೇಜೊಂದರ ನಾಲ್ವರು ವಿದ್ಯಾರ್ಥಿಗಳು ಎರಡು ಬೈಕ್ ನಲ್ಲಿ ಬಂದು ಕೂಳೂರು ಸೇತುವೆ ಚೆಕ್ ಪೋಸ್ಟ್ ನಲ್ಲಿ ದಾಳಿ ನಡೆಸಿದ್ದಾರೆ.

ಈ ಯುವಕರು ಇಂದು ನಸುಕಿನ ವೇಳೆ ಲಾರಿಯವರ ಜೊತೆ ಜಗಳವಾಡಿದ್ದರು. ಲಾರಿ ಚಾಲಕನ ನೀಡಿದ ದೂರಿನನ್ವಯ ಪೊಲೀಸರು ಕೂಳೂರು ಚೆಕ್ ಪೋಸ್ಟ್ ನಲ್ಲಿ ಯುವಕರನ್ನು ಅಡ್ಡಹಾಕಿದ್ದರು. ಆದರೆ ಒಂದು ಬೈಕ್ ನ ಸವಾರರು ಪೊಲೀಸರ ಬ್ಯಾರಿಕೇಡ್ ಮುರಿದು ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ಉಜಿರೆ ಟು ಕೋಲಾರ: ಬಾಲಕ ಅನುಭವ್ ಅಪಹರಣಕಾರರ ಬಂಧನ ಹೇಗಾಯ್ತು?

ಮತ್ತೊಂದು ಬೈಕ್ ನ್ನು ಪೊಲೀಸರು ತಡೆದಿದ್ದಾರೆ. ಆದರೆ ಪೊಲೀಸರ ಮೇಲೆ ಎಗರಿದ ಯುವಕರು ಹಲ್ಲೆ ನಡೆಸಿ ಪೊಲೀಸರ ಬಂದೂಕು ಕಿತ್ತುಕೊಂಡು ಮುರಿದುಹಾಕಿದ್ದಾರೆ.

Advertisement

ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕೂಳೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next