Advertisement

ಓವರ್‌ಟೇಕ್‌ ಮಾಡಿದಕ್ಕೆ ಹಲ್ಲೆ

12:49 PM Nov 13, 2017 | Team Udayavani |

ಬೆಂಗಳೂರು: ಕಾರು ಓವರ್‌ಟೇಕ್‌ ಮಾಡಿದಕ್ಕೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮೇಲೆ ಐದಾರು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕದಿರೇನಹಳ್ಳಿ ಕ್ರಾಸ್‌ ಬಳಿ ಶನಿವಾರ ರಾತ್ರಿ ನಡೆದಿದೆ. ಕುಮಾರಸ್ವಾಮಿ ಲೇಔಟ್‌ ನಿವಾಸಿ ಜಬೀವುಲ್ಲಾ ಹಲ್ಲೆಗೊಳಗಾದವರು.

Advertisement

ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದೀಪಕ್‌ ಮತ್ತು ಇತರೆ ನಾಲ್ಕು ಮಂದಿಯನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕದಿರೇನಹಳ್ಳಿ ಬಳಿ ದೀಪಕ್‌ ಮತ್ತು ಇತರೆ ಆರೋಪಿಗಳು ಕಾರಿನಲ್ಲಿ ಹೋಗುತ್ತಿದ್ದರು.

ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಜಬೀವುಲ್ಲಾ ಕಾರನ್ನು ಹಿಂದಿಕ್ಕಿ ಮಂದೆ ಹೋಗಿದ್ದಾರೆ. ಅನಂತರ ಕದಿರೇನಹಳ್ಳಿಯ ಕ್ರಾಸ್‌ನ ಇಂದಿರಾ ಕ್ಯಾಂಟಿನ್‌ ಬಳಿ ಬೈಕ್‌ ಅನ್ನು ಅಡ್ಡ ಹಾಕಿದ ದುಷ್ಕರ್ಮಿಗಳು ಕಾರನ್ನು ಹಿಂದಿಕ್ಕಿದನ್ನು ಪ್ರಶ್ನಿಸಿ, ಜಬೀವುಲ್ಲನ ಮೂಗು, ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next